ಚಾಮರಾಜನಗರ: ಬೆಳೆ ಕಾಯಲು ಜಮೀನಿನಲ್ಲಿ ಮಲಗಿದ್ದ ರೈತನ ಎದೆಗೆ ಒದ್ದ ಕಾಡಾನೆ

Update: 2024-06-29 04:45 GMT

ಚಾಮರಾಜನಗರ, ಜೂ.29: ಜಮೀನಿನಲ್ಲಿ ಮಲಗಿದ್ದ ರೈತನ ಎದೆಯ ಮೇಲೆ ಕಾಡಾನೆ ಕಾಲಿಟ್ಟ ಘಟನೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ನಿವಾಸಿ ಬಸವಣ್ಣ (52 ) ಕಾಡಾನೆ ದಾಳಿಯಿಂದ ಗಾಯಗೊಂಡ ರೈತ.

ಜಮೀನಿನಲ್ಲಿ ಬೆಳೆದಿದ್ದ ಆಲೂಗೆಡ್ಡೆ ಬೆಳೆಯ ಸಂರಕ್ಷಣೆಗಾಗಿ ಬಸವಣ್ಣ ಜಮೀನಿನ ಕಾವಲಿಗೆ ತೆರಳಿದ್ದರು. ಜಮೀನಿನ ತೆವರಿನ ಮೇಲೆ ಬಸವಣ್ಣ ಮಲಗಿದ್ದ ವೇಳೆ ಕಾಡಾನೆಯೊಂದು ಅವರ ಬಲ ಎದೆಯ ಮೇಲೆ ಕಾಲಿಟ್ಟಿದೆ. ಕಾಲಿಡುತ್ತಿದ್ದಂತೆ ಬಸವಣ್ಣ ಕೂಗಿಕೊಂಡಿದ್ದರಿಂದ ಆನೆ ತನ್ನ ಮರಿ ಜೊತೆ ಕಾಲ್ಕಿತ್ತಿದೆ.

ಎದೆ ಮೇಲೆ ಕಾಲಿಟ್ಟ ಪರಿಣಾಮ ಬಸವಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಾಹಿತಿ ಅರಿತ ತಕ್ಷಣ ಸ್ಥಳೀಯರು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಬಸವಣ್ಣರನ್ನು ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News