ಚಾಮರಾಜನಗರ | ಶ್ರೀಗಂಧ ಮರದ ತುಂಡುಗಳ ಸಾಗಾಟ ; ಇಬ್ಬರ ಬಂಧನ

Update: 2024-09-09 07:09 GMT

ಚಾಮರಾಜನಗರ : ದ್ವಿಚಕ್ರ ವಾಹನದಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನ ಒಪ್ಪಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹನೂರು ತಾಲ್ಲೂಕು ವ್ಯಾಪ್ತಿಯ ಅಜ್ಜೀಪುರ-ಮಂಚಾಪುರ ನಡುವೆ ರಾಮಾಪುರ ಕಡೆಗೆ ಗೋಪಿಶೆಟ್ಟಿಯೂರು ಗ್ರಾಮದ ಸೇಟು, ಮುತ್ತುಶೆಟ್ಟಿಯೂರು ಗ್ರಾಮದ ವಿಜಯ್ ಎಂಬವರು ಶ್ರೀಗಂಧ ತುಂಡುಗಳನ್ನು ಚೀಲದಲ್ಲಿ ತುಂಬಿಕೊಂಡು ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ 15 ಕೆ.ಜಿ 50 ಗ್ರಾಂ ತೂಕದ 36 ಶ್ರೀಗಂಧ ತುಂಡುಗಳನ್ನು ಜಪ್ತಿಮಾಡಿಕೊಂಡದ್ದು, ಶ್ರೀಗಂಧ ಸಾಗಾಣಿಕೆ ಮಾಡುತ್ತಿದ್ದ ಹೋಂಡಾ ಡಿಯೋ ಮೊಪೆಡ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News