ಗುಂಡ್ಲುಪೇಟೆ: ಕೊಟ್ಟಿಗೆಯಿಂದ 21 ಮೇಕೆಗಳನ್ನು ಕದ್ದೊಯ್ದ ಕಳ್ಳರು!

Update: 2024-02-08 08:12 GMT

ಚಾಮರಾಜನಗರ, ಫೆ.8: ಕೊಟ್ಟಿಗೆಯಲ್ಲಿದ್ದ ಸುಮಾರು 21 ಮೇಕೆಗಳನ್ನ ಕಳ್ಳರು ಕದ್ದೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಂಚಹಳ್ಳಿ ಗ್ರಾಮದ ನಾಗೇಶ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ 21 ಮೇಕೆಗಳಿದ್ದವು. ಎಂದಿನಂತೆ ಇಂದು ಬೆಳೆಗ್ಗೆ ನಾಗೇಶ್ ಕೊಟ್ಟಿಗೆಗೆ ತೆರಳಿದಾಗ ಮೇಕೆಗಳನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.

ಜೀವನಕ್ಕಾಧಾರವಾಗಿದ್ದ ಮೇಕೆಗಳನ್ನ ಕಳೆದುಕೊಂಡ ರೈತ ನಾಗೇಶ್ ಕಂಗಾಲಾಗಿದ್ದಾರೆ.

ಈ ಬಗ್ಗೆ ಬೇಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News