ಕೊಳ್ಳೇಗಾಲ | ಬೈಕಿಗೆ ಅಡ್ಡವಾಗಿ ನವಿಲು ನುಗ್ಗಿದ್ದರಿಂದ ಅಪಘಾತ: ಬೈಕ್ ಸವಾರ ಮೃತ್ಯು

Update: 2024-06-29 04:36 GMT

ಚಾಮರಾಜನಗರ, ಜೂ.29: ಬೈಕ್ ಸವಾರನಿಗೆ ನವಿಲು ಅಡ್ಡ ಬಂದಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ನವಿಲು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಜರುಗಿದೆ.

ಕೊಳ್ಳೇಗಾಲ ತಾಲೂಕಿನ ಸೂರಪೂರ ಗ್ರಾಮದ ವಾಸಿ ರಾಜೂಗೌಡ ಎಂಬವರ ಪುತ್ರ ರೇವಣ್ಣ(25) ಮೃತಪಟ್ಟವರು. ಇವರು ಬೆಂಗಳೂರಿನಲ್ಲಿ ಏರ್ ಟೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇವರು ಸೂರಪೂರದಿಂದ ಕುಂತೂರು ಕಡೆಗೆ ಬೈಕಿನಲ್ಲಿ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಏಕಾಏಕಿ ಬೈಕಿಗೆ ಅಡ್ಡಲಾಗಿ ನವಿಲು ನುಗ್ಗಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರೇವಣ್ಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದಲ್ಲಿ ನವಿಲು ಕೂಡಾ ಸಾವನ್ನಪ್ಪಿದೆ.

ಈ ಸಂಬಂಧ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News