ಚಿಕ್ಕಮಗಳೂರು | ಹಾರೆಯಿಂದ ಹೊಡೆದು ತಂದೆಯಿಂದಲೇ ಮಗನ ಹತ್ಯೆ

Update: 2024-08-07 10:35 GMT

ಚಿಕ್ಕಮಗಳೂರು : ತಂದೆಯೇ ತನ್ನ ಮಗನನ್ನು ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಇಂದಿರಾ ನಗರ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ತಂದೆ ಗೋಪಾಲಗೌಡ ಎಂಬವರು ತನ್ನ ಮಗ ಪ್ರಸನ್ನ(38) ಎಂಬುವರನ್ನು ಮಂಗಳವಾರ ರಾತ್ರಿ ಮನೆಯಲ್ಲಿದ್ದ ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಇಂದಿರಾ ನಗರ ಮನೆಯಲ್ಲಿ ನಿನ್ನೆ(ಆ.6) ರಾತ್ರಿ ತಂದೆ ಹಾಗೂ ಮಗ ಜಗಳ ಮಾಡಿಕೊಂಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮನೆಯಲ್ಲಿದ್ದ ಹಾರೆಯಿಂದ ಗೋಪಾಲಗೌಡ ಮಗನ ತಲೆಗೆ ಹೊಡೆದಿದ್ದು, ತೀವ್ರ ಗಾಯಗೊಂಡ ಮಗ ಪ್ರಸನ್ನ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗೋಪಾಲಗೌಡನನ್ನು ಬಂಧಿಸಿದ್ದಾರೆ.

ಮೃತ ಪ್ರಸನ್ನಗೆ ವಿವಾಹವಾಗಿದ್ದು, ಪತ್ನಿ ತನ್ನ ಮಕ್ಕಳೊಂದಿಗೆ ಬೇರೆಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News