ಜೂ.1-2: ಬೃಹತ್ ಕೃಷಿ ಸಮ್ಮೇಳನ

Update: 2024-05-16 17:46 GMT

ಉಡುಪಿ, ಮೇ16: ಪರ್ಯಾಯ ಪುತ್ತಿಗೆ ಮಠ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘದ ಸಹಯೋಗದಲ್ಲಿ ಜೂನ್ 1 ಮತ್ತು 2ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಬೃಹತ್ ಕೃಷಿ ಸಮ್ಮೇಳನ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ಈ ಎರಡು ದಿನಗಳ ಈ ಸಮ್ಮೇಳನದಲ್ಲಿ ವೈವಿದ್ಯಮಯ ವಸ್ತು ಪ್ರದರ್ಶನದಲ್ಲಿ ಸ್ಟಾಲ್ ಹಾಕುವವರಿಗೆ ಅವಕಾಶ ಕಲ್ಪಿಸಲಾಗುವುದು. ಕೃಷಿ ಸಾಮಗ್ರಿ, ವಸ್ತುಗಳು, ಯಂತ್ರಗಳು, ನರ್ಸರಿ ಗಿಡಗಳು, ಮನೆಯಿಂದ ತಯಾರಿಸಿದ ಸಾರುಪುಡಿ, ಹಪ್ಪಳ, ಹಲಸಿನ ತಿಂಡಿ , ತರಕಾರಿ ಬೀಜ ಇತ್ಯಾದಿಗಳ ಮಾರಾಟಗಾರರು ಇದರಲ್ಲಿ ಭಾಗವಹಿಸಬಹುದು.

ಆಸಕ್ತರು ತಮ್ಮ ಹೆಸರು, ವಿವರದೊಂದಿಗೆ ಈ ಕೆಳಗಿನ ಮೊಬೈಲ್ ನಂಬರ್ ಗಳಿಗೆ - ಶ್ರೀನಿವಾಸ್ ಬಲ್ಲಾಳ್: 9844614510 ಹಾಗೂ ಶ್ರೀಪತಿ ಭಟ್: 9449365875- ಮೇ25ರೊಳಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಎರಡು ದಿನಗಳ ಸಮ್ಮೇಳನದಲ್ಲಿ 10000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News