ಮಂಗಳೂರು | ಸಾಮಾಜಿಕ ಮುಂದಾಳು ಮುಮ್ತಾಝ್ ಅಲಿ ನಾಪತ್ತೆ ; ಪ್ರಕರಣ ದಾಖಲು

Update: 2024-10-06 09:25 GMT

ಮಂಗಳೂರು: ಸಾಮಾಜಿಕ ಮುಂದಾಳು, ಉದ್ಯಮಿ ಬಿ.ಎಂ.ಮುಮ್ತಾಝ್ ಅಲಿ (52) ಅವರು ನಾಪತ್ತೆಯಾಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ಫ್ಯಾಮಿಲಿ ಗ್ರೂಪ್ ನಲ್ಲಿ ಮುಂಜಾನೆ 3.30ರ ಹೊತ್ತಿಗೆ ಬಂದ ಧ್ವನಿ ಸಂದೇಶವನ್ನು ಆಲಿಸಿದ ಕೂಡಲೇ ತಂದೆಯವರನ್ನು ಹುಡುಕಲು ಮನೆಯವರೊಂದಿಗೆ ಕಾರಿನಲ್ಲಿ ಹೊರಟೆವು. ಕೂಳೂರು ಬ್ರಿಡ್ಜ್ ತಲುಪಿದಾಗ ಅಲ್ಲಿ ತಂದೆಯವರ ಕಾರು ಪತ್ತೆಯಾಗಿದ್ದು, ಮುಂಭಾಗ ನುಜ್ಜುಗುಜ್ಜಾಗಿತ್ತು. ಈ ವೇಳೆ ತಂದೆಯವರು ಕಾರಿನಲ್ಲಿ ಇರಲಿಲ್ಲ" ಎಂದು ಮುಮ್ತಾಝ್ ಅಲಿ ಅವರ ಮಗಳು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಉಪ ವಿಭಾಗದ ಅಧಿಕಾರಿಗಳು ಮತ್ತು ಎನ್.ಡಿ.ಆರ್.ಎಫ್ ತಂಡದವರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News