ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆಗೆ ಬೀಳ್ಕೊಡುಗೆ

Update: 2024-07-15 11:56 GMT

ಅಬುಧಾಬಿ: ತಾಯ್ನಾಡಿಗೆ ವಾಸ್ತ್ಯವ್ಯ ಬದಲಿಸುತ್ತಿರುವ ಅಬ್ದುಲ್ಲಾ ಮಾದುಮೂಲೆ ಅವರಿಗೆ ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.

ನಗರದ ಗ್ರಾಂಡ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆದ ಸಮಾರಂಭವು ಬಿ.ಡಬ್ಲ್ಯೂ.ಫ್ ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಅಬ್ದುಲ್ಲಾ ಮಾದುಮೂಲೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಅಬ್ದುಲ್ಲ ಮಾದುಮೂಲೆ ತಾವು ನಡೆದು ಬಂದ ದಾರಿ, ಬಿ ಡಬ್ಲ್ಯೂ ಫ್ ನೊಂದಿಗಿನ 22 ವರ್ಷದ ನಂಟನ್ನು ನೆನಪಿಸಿ ಭಾವುಕರಾದರು. ಮೊಹಮ್ಮದ್ ಅಲಿ ಉಚ್ಚಿಲ್ ತಮ್ಮ ಮತ್ತು ಮಾದುಮೂಲೆಯವರ ದೀರ್ಘಕಾಲದ ಸ್ನೇಹ, ಸಮುದಾಯ ಸೇವೆಯಲ್ಲಿ ಒಟ್ಟಿನ ಪಯಣ ಕುರಿತು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.


ಬಿ.ಡಬ್ಲ್ಯೂ.ಫ್ ಒಡನಾಡಿಗಳಾದ ಹಮೀದ್ ಗುರುಪುರ, ಅಬ್ದುಲ್ ಮಜೀದ್ ಆಡಿಟರ್, ಹನೀಫ್ ಉಳ್ಳಾಲ್, ನವಾಝ್ ಉಚ್ಚಿಲ್,‌ ಇರ್ಫಾನ್ ಕುದ್ರೋಳಿ, ಮೊಯಿನುದ್ದೀನ್ ಹಂಡೇಲ್, ಮುಜೀಬ್ ಉಚ್ಚಿಲ್, ಮಜೀದ್ ಆತೂರ್, ರಶೀದ್ ವಿಕೆ, ಬಷೀರ್ ಉಚ್ಚಿಲ್, ನಿಝಾಮ್ ವಿಟ್ಲ, ಯಹ್ಯಾ ಕೊಡ್ಲಿಪೇಟೆ, ಇಮ್ರಾನ್ ಕೃಷ್ಣಾಪುರ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು. 

ನೂಹ್ ರಶೀದ್ ಕಿರಾಅತ್ ಪಠಿಸಿದರು ಮತ್ತು ಹಂಝ ಕಣ್ಣಂಗಾರ್ ಸ್ವಾಗತಿಸಿದರು. ಅಬ್ದುಲ್ ರವೂಫ್ ಮತ್ತು ಇಮ್ರಾನ್ ಕುದ್ರೋಳಿ ಕಾರ್ಯಕ್ರಮ ನಡೆಸಿಕೊಟ್ಟರು. ಸಿರಾಜ್ ಪರ್ಲಡ್ಕ ವಂದಿಸಿದರು.



















 


 


 


 


 



 


 


 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News