ಸಕಲೇಶಪುರ: ಕಾಡಾನೆ ದಾಳಿಯಿಂದ ಮನೆಗೆ ಹಾನಿ

Update: 2024-05-21 06:27 GMT

ಸಕಲೇಶಪುರ: ಕಾಡಾನೆಗಳು ಮನೆಯ ಸೀಟ್ ಹಾಗೂ ಹೆಂಚನ್ನು ಧ್ವಂಸಗೊಳಿಸಿರುವ ಘಟನೆ ತಾಲೂಕಿನ ಹೆತ್ತೂರು ಹೋಬಳಿಯ ಯಡಕುಮಾರಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ .

ವೆಂಕಟೇಶ್ ಎಂಬವರ ಮನೆ ಮೇಲೆ ಕಾಡಾನೆಗಳು ದಾಳಿ ನಡೆಸಿದ್ದು, ಮನೆಯ ಸೀಟ್ ಹಾಗೂ ಹೆಂಚು ಹಾನಿಗೀಡಾಗಿದೆ. ಮನೆಯ ಪರಿಸರದಲ್ಲಿದ್ದ ಬಾಳೆಗಿಡಗಳನ್ನೂ ನಾಶಪಡಿಸಿವೆ. 

ಕಳೆದ 20 ದಿನಗಳಿಂದ ಕಾಡಾನೆಗಳ ಗುಂಪು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರು ಆತಂಕದಲ್ಲಿ ಜೀವಿಸುವಂತಾಗಿದೆ ಎಂದು ತಿಳಿದು ಬಂದಿದೆ.

  

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News