ಸಂತ್ರಸ್ತೆಯ ಅಪಹರಣ ಪ್ರಕರಣ | ಭವಾನಿ ರೇವಣ್ಣ ಅರ್ಜಿ ವಿಚಾರಣೆ ನಾಳೆ

Update: 2024-05-31 10:18 GMT

ಹಾಸನ: ಕೆ ಆರ್ ನಗರ ಠಾಣೆಯಲ್ಲಿ ದಾಖಲಾಗಿರುವ  ಕಿಡ್ನಾಫ್ ಸಂಬಂಧ ನಾಳೆ ಭವಾನಿ ರೇವಣ್ಣ ಅವರ ವಿಚಾರಣೆ ಅವರ ನಿವಾಸದಲ್ಲಿ ನಡೆಯಲಿದೆ.

ಎಸ್ ಐ ಟಿ ಗೆ ಪತ್ರ ಬರೆದು ಅವಶ್ಯವಿದ್ದರೆ ತನಿಖೆಗೆ ತಮ್ಮ ಮನೆಯಲ್ಲಿ ಲಭ್ಯವಿರುವುದಾಗಿ  ಭವಾನಿ ಅವರು ತಿಳಿಸಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುತ್ತಿರುವುದಾಗಿ ಎಸ್ ಐ ಟಿಯಿಂದ ನೋಟೀಸ್ ನಲ್ಲಿ ತಿಳಿಸಲಾಗಿದೆ.  

ವಿಚಾರಣೆಗಾಗಿ ಬೆಳಿಗ್ಗೆ 10.00 ರಿಂದ ಸಂಜೆ 5.00 ರ ತನಕ ಸದರಿ ವಿಳಾಸದಲ್ಲಿ ಹಾಜರಿರಬೇಕೆಂದು ನೋಟೀಸ್‌ ನಲ್ಲಿ ಸೂಚಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News