ಕಲಬುರಗಿ | ಹತ್ತು ಅಡಿ ಜಾಗಕ್ಕಾಗಿ ಗಲಾಟೆ : ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯ!

Update: 2024-10-22 08:27 GMT

ಚಂದ್ರಕಾಂತ ಜಮಾದರ್ (48)

ಕಲಬುರಗಿ : ಬಡಿಗೆಯಿಂದ ಹೊಡೆದು ವ್ಯಕ್ತಿಯೊಬ್ಬನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರ ಹೊರವಲಯದ ಆಜಾದಪುರ ಗ್ರಾಮದಲ್ಲಿ ನಡೆದಿದೆ.

ಚಂದ್ರಕಾಂತ ಜಮಾದರ್ (48) ಕೊಲೆಯಾದ ವ್ಯಕ್ತಿಯಾಗಿದ್ದು, ಮನೆ ಬಳಿ ಇರುವ ಹತ್ತು ಅಡಿ ಜಾಗದ ವಿಚಾರವಾಗಿ ಗ್ರಾಮದ ಮೌನೇಶ್ ಗುತ್ತಿಗೆದಾರ್ ಹಾಗೂ ಚಂದ್ರಕಾಂತ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಬಡಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮೌನೇಶ್ ಗುತ್ತೆದಾರ್ ಸೇರಿದಂತೆ ನಾಲ್ಕೈದು ಮಂದಿ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News