ಬದಿಯಡ್ಕ | ಆಕಸ್ಮಿಕವಾಗಿ ಚಲಿಸಿದ ಲಾರಿ: ಗೇಟ್ ತೆರೆಯಲು ಇಳಿದಿದ್ದ ಚಾಲಕ ಲಾರಿಯ ಚಕ್ರದಡಿಗೆ ಸಿಲುಕಿ ಮೃತ್ಯು

Update: 2023-12-09 10:06 GMT

ಕಾಸರಗೋಡು, ಡಿ.9: ಆಕಸ್ಮಿಕವಾಗಿ ಲಾರಿ ಚಲಿಸಿದ್ದರಿಂದ ಗೇಟ್ ತೆಗೆಯಲು ಇಳಿದಿದ್ದ ಅದೇ ಲಾರಿ ಚಾಲಕ ಚಕ್ರದಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಬದಿಯಡ್ಕ ಸಮೀಪದ ನೀರ್ಚಾಲು ಗೋಳಿಯಡ್ಕ ಎಂಬಲ್ಲಿ ನಡೆದಿದೆ.

ಪಾಡಿ ಉತ್ತರತ್ತೋಡಿ ನಿವಾಸಿ ಮುಹಮ್ಮದ್ ನೌಫಲ್ (23) ಮೃತಪಟ್ಟ ಯುವಕ. ನೌಫಲ್ ತಾನು ಚಲಾಯಿಸುತ್ತಿದ್ದ ಲಾರಿಯ ಇಂಜಿನ್ ಅನ್ನು ಚಾಲನೆಯಲ್ಲಿರಿಸಿ ಗೇಟ್ ತೆರೆಯಲು ಹೋದ ವೇಳೆ ಲಾರಿ ಏಕಾಏಕಿ ಮುಂದಕ್ಕೆ ಚಲಿಸಿದಾಗ ನೌಫಲ್ ಅದರ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡರೆನ್ನಲಾಗಿದೆ.

ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News