ಕಾಸರಗೋಡು: ಉದ್ಯೋಗದ ಭರವಸೆ ನೀಡಿ 15 ಲಕ್ಷ ರೂ. ವಂಚನೆ; ಶಿಕ್ಷಕಿ ವಿರುದ್ಧ ದೂರು ದಾಖಲು

Update: 2024-10-08 03:27 GMT

ಕಾಸರಗೋಡು : ಉದ್ಯೋಗ ನೀಡುವ ಭರವಸೆ ನೀಡಿ ಸುಮಾರು 15 ಲಕ್ಷ ರೂ . ಪಡೆದು ವಂಚನೆ ನಡೆಸಿರುವುದಾಗಿ ಆರೋಪಿಸಿ ಶಿಕ್ಷಕಿ ಹಾಗೂ ರಾಜಕೀಯ ಪಕ್ಷದ ಯುವ ಸಂಘಟನೆಯ ನಾಯಕಿಯೋರ್ವಳ ವಿರುದ್ಧ ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಕಿದೂರು ಪದಕ್ಕಲ್ ಹೌಸ್ ನ ನಿಶ್ಮಿತಾ ಶೆಟ್ಟಿ ಅವರ ದೂರಿನಂತೆ ಶೇಣಿ ಬಲ್ತಕಲ್ಲಿನ ಸಚಿತಾ ರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಪಿಸಿಆರ್ ಐ ನಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿ 2023 ರ ಮೇ 31 ರಿಂದ 2023 ರ ಆಗಸ್ಟ್ 25 ರ ನಡುವೆ ಹಲವು ಕಂತುಗಳಾಗಿ 15,05,796 ರೂ . ಪಡೆದು ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಹಲವು ಬಾರಿ ವಿಚಾರಿಸಿದರೂ ಉದ್ಯೋಗ ಲಭಿಸಲಿಲ್ಲ. ನೀಡಿದ ಹಣ ಕೇಳಿದರೂ ನೀಡಲು ಮುಂದಾಗದಿರುವುದರಿಂದ ನಿಶ್ಮಿತಾ ಶೆಟ್ಟಿ ದೂರು ನೀಡಿದ್ದಾರೆ.

ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News