ಕಾಸರಗೋಡು: ಎ ಟಿ ಎಂ ಕೌಂಟರ್ ನಲ್ಲಿ ಸಿಲುಕಿದ ತಾಯಿ - ಪುತ್ರಿಯ ರಕ್ಷಣೆ

Update: 2023-11-14 13:45 GMT

ಸಾಂದರ್ಭಿಕ ಚಿತ್ರ

ಕಾಸರಗೋಡು : ನಗರದ ಎ ಟಿ ಎಂ ಕೌಂಟರ್ ನಲ್ಲಿ ತಾಯಿ ಮತ್ತು ಪುತ್ರಿ ಸಿಲುಕಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಇವರನ್ನು ರಕ್ಷಿ ಸಿದರು.

ಚೇರಂಗೈ ನಿವಾಸಿ ಮಹಿಳೆ ಮತ್ತು ಆಕೆಯ ಎಂಟು ವರ್ಷದ ಪುತ್ರಿ ನಗರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಎ.ಟಿ.ಎಂ ಗೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಹಣ ತೆಗೆಯಲು ಕೌಂಟರ್ ನೊಳಗೆ ತೆರಳಿದ್ದ ಮರಳುತ್ತಿದ್ದಾಗ ಬಾಗಿಲು ಲಾಕ್ ಆಗಿದ್ದು, ಇದರಿಂದ ಬೊಬ್ಬೆ ಹಾಕಿದರು. ಇದನ್ನು ಗಮನಿಸಿದ ಅಲ್ಲಿದ್ದವರು ಕೂಡಲೇ ಸಮೀಪದಲ್ಲಿದ್ದ ಪೊಲೀಸರಿಗೆ ತಿಳಿಸಿರು.

ಪೊಲೀಸರು ಸ್ಥಳಕ್ಕೆ ತೆರಳಿ ಬಳಿಕ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದರು. ಅಗ್ನಿ ಶಾಮಕ ದಳ ಸಿಬ್ಬಂದಿ ಎಟಿಎಂ ನ ಬಾಗಿಲನ್ನು ಯಂತ್ರದ ಮೂಲಕ ತುಂಡರಿಸಿ ಇಬ್ಬರನ್ನು ರಕ್ಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News