ಕಾಸರಗೋಡು | ರೈಲಿಗೆ ಕಲ್ಲೆಸೆತ; ಬಾಗಿಲಿನ ಗಾಜು ಧ್ವಂಸ

Update: 2023-09-02 07:35 GMT

ಕಾಸರಗೋಡು: ಜಿಲ್ಲೆಯಲ್ಲಿ ರೈಲುಗಳಿಗೆ ಕೆಲ್ಲೆಸೆತದ ಘಟನೆ ಮತ್ತೆ ಮರುಕಳಿಸಿದೆ. ತಿರುವನಂತಪುರದಿಂದ ಮುಂಬೈಗೆ ತೆರಳುತ್ತಿದ್ದ ನೇತ್ರಾವತಿ ರೈಲಿಗೆ ಶುಕ್ರವಾರ ರಾತ್ರಿ ಕುಂಬಳೆ - ಉಪ್ಪಳ ನಡುವೆ ಕಲ್ಲೆಸೆದ ಘಟನೆ ನಡೆದಿದೆ.

ಎಸ್-2 ಬೋಗಿಗೆ ಕಲ್ಲೆಸೆಯಲಾಗಿದ್ದು , ಬಾಗಿಲಿನ ಗಾಜು ಹುಡಿಯಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಬಗ್ಗೆ ಮಂಗಳೂರಿನ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದಾರೆ . ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಒಂದೆರಡು ತಿಂಗಳಿನಿಂದ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಕಲ್ಲೆಸೆತದ ಘಟನೆಗಳು ನಡೆಯುತ್ತಿದ್ದು , ಆಗಸ್ಟ್ 16 ರಂದು ಕಣ್ಣೂರಿನಲ್ಲಿ ವಂದೇ ಭಾರತ್, 24 ರಂದು ತಲಶ್ಶೇರಿಯಲ್ಲಿ ಏರನಾಡ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಘಟನೆ ನಡೆದಿತ್ತು . ಕೆಲ ತಿಂಗಳಿಂದ ಕಾಸರಗೋಡು - ಕಣ್ಣೂರು ನಡುವೆ ರೈಲುಗಳ ಮೇಲೆ ಹಲವಾರು ಕಲ್ಲೆಸೆತದ ಘಟನೆಗಳು ವರದಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News