ಕಾಸರಗೋಡು: ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2024-09-14 04:59 GMT

ಕಾಸರಗೋಡು: ಅತ್ತಾವರ ಕೆ.ಎಂ.ಸಿ.ಆಸ್ಪತ್ರೆ ಹಾಗೂ  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ  ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ (ಸೆ.14) ದಂದು ನಡೆಯಲಿದೆ.

ಡಾ. ಅರವಿಂದ ಎನ್. ಡಾ. ಎನ್‌. ಬಿ. ಇವರ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ,ಎಲುಬು ಮತ್ತು ಕೀಲು ರೋಗ, ಸಾಮಾನ್ಯ ರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಚರ್ಮರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ  ತಜ್ಞ ವೈದ್ಯರಿಂದ ನಡೆಯಲಿದೆ. ಉಚಿತ ಬಿ.ಪಿ.,ಶುಗರ್ ತಪಾಸಣೆ, ಉಚಿತ ಔಷಧಗಳು ನಾಗರಿಕರಿಗೆ ಲಭ್ಯವಿರುತ್ತದೆ.

 ಫಲಾನುಭವಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಕೆ.ಎಂ.ಸಿ.ಆಸ್ಪತ್ರೆಯ ಹಸಿರು ಕಾರ್ಡು ನೀಡಲಾಗುವುದು. ಒಂದು ತಿಂಗಳ ಮಾನ್ಯತೆ ಹೊಂದಿರುವ ಈ ಕಾರ್ಡ್ ಮುಖಾಂತರ ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ಪ್ರತಿಷ್ಠಾನವು ಪ್ರಕಟಣೆ ಮೂಲಕ ತಿಳಿಸಿದೆ.  

ಕಾಸರಗೋಡಿನ ಹಿರಿಯ ವೈದ್ಯರು ಗಳು ಕಾರ್ಯಕ್ರಮ ಬಂದು ಸಲಹೆ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News