ಕೋಲಾರ | ಕುರಿದೊಡ್ಡಿಗೆ ನುಗ್ಗಿದ ಚಿರತೆ ; ಹತ್ತು ಕುರಿಗಳು ಬಲಿ

Update: 2024-09-11 07:56 GMT

ಕೋಲಾರ : ರಾತ್ರಿ ವೇಳೆ ಕುರಿದೊಡ್ಡಿಗೆ ನುಗ್ಗಿದ ಚಿರತೆಯೊಂದು, ಸುಮಾರು ಹತ್ತು ಕುರಿಗಳನ್ನು ತಿಂದು ತೇಗಿರುವ ಘಟನೆ ಕೋಲಾರ ತಾಲ್ಲೂಕು ಅಬ್ಬಣಿ ಗ್ರಾಮದಲ್ಲಿ ಜರುಗಿದೆ.

ಕೋಲಾರ ತಾಲ್ಲೂಕಿನ ಅಬ್ಬಿಣಿ ಗ್ರಾಮದ ನಾರಾಯಣಪ್ಪ ಎಂಬುವರಿಗೆ ಸೇರಿದ ಕುರಿಗಳು, ಚಿರತೆಗೆ ಆಹಾರವಾಗಿದೆ. ಕಳೆದೊಂದು ವಾರದಲ್ಲಿ ಇದು ನಾಲ್ಕನೇ ಬಾರಿ ಚಿರತೆಯಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಕುರಿಗಳನ್ನು ತಿಂದಿರುವ ಚಿರತೆ, ಗ್ರಾಮಸ್ಥರಲ್ಲಿಆತಂಕ ಸೃಷ್ಟಿಸಿದೆ. ಚಿರತೆ ಹಿಡಿದು ಅರಣ್ಯಕ್ಕೆ ಬಿಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News