ಪಾಕ್‌ ಪರ ಘೋಷಣೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ : ಸಚಿವ ದಿನೇಶ್ ಗುಂಡೂರಾವ್

Update: 2024-03-06 18:28 GMT

ಕೋಲಾರ: ಪಾಕ್‌ ಪರ ಘೋಷಣೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ, ಆದರೆ ಪಾಕಿಸ್ತಾನ್ ಝಿಂದಾಬಾದ್ ಎನ್ನುವುದನ್ನು ಯಾರೂ ಸಹ ಸಹಿಸುವುದಕ್ಕೆ ಆಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೋಲಾರಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಸದನದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಚಾರವಾಗಿ ನಮಗೆಲ್ಲಾ ತುಂಬಾ ನೋವಿದೆ ಎಂದರು.

ಯಾರೇ ಆಗಲಿ ಅವರ ವಿರುದ್ದ ಕ್ರಮಕೈಗೊಳ್ಳುವುದಾಗಿ ಹೇಳಿ. ಇನ್ನೂ ಈಗಾಗಲೇ ಘೋಷಣೆ ಕೂಗಿದವರು ಬಂಧನಕ್ಕೆ ಒಳಗಾಗಿದ್ದಾರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ರಾಜಕೀಯವಾಗಿ ಬಿಜೆಪಿಯವರು ಈ ವಿಚಾರವನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ನಾವು ಪ್ರಾರಂಭದಲ್ಲೊ ಸಮರ್ಥನೆ ಮಾಡಿಕೊಂಡಿಲ್ಲ, ಸಿಎಂ ಅವರು FSL ವರದಿ ಬಂದ ನಂತರ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಯಾಕೆಂದರೆ ಈ ಹಿಂದೆ ನಮ್ಮಲ್ಲಿ ಸುಮಾರು ಘಟನೆಗಳು ನಡೆದಾಗ ಆ ರೀತಿ ನಡೆದಿಲ್ಲ ಎಂದು FSL ವರದಿ ಬಂದಿದ್ದು, ಹೀಗಾಗಿ ಸಾಕ್ಷಿ ಬೇಕಾಗುತ್ತದೆ ಅದರಿಂದ ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News