ಕೊಪ್ಪಳ| ಮನೆ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Update: 2024-08-27 17:30 GMT

ಕೊಪ್ಪಳ/ಗಂಗಾವತಿ: ತಾಲ್ಲೂಕಿನಲ್ಲಿ ಈಚೆಗೆ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೌಸಿಯಾ ಕಾಲೋನಿ ನಿವಾಸಿ ಖಾಜಾ (21),ಹನೀಫ್ (22) ಬಂಧಿತ ಆರೋಪಿಗಳು.

ನಗರದ ಗೌಸಿಯಾ ಕಾಲೋನಿ ನಿವಾಸಿ ಎಂ.ಡಿ ಸರ್ವರ್ ಹುಸೇನ್ ಎಂಬುವರು ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ಗಂಗಾವತಿ ನಗರ ಠಾಣೆಯ ಇನ್ಸಪೆಕ್ಟರ್ ಪ್ರಕಾಶ ಮಾಳಿ ಅವರ ನೇತೃತ್ವದಲ್ಲಿ ತಂಡ ರಚಿಸಿ ಅರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಅರೋಪಿಗಳಿಂದ 2,63,000 ರೂ. ಗಳ ಬೆಳೆಬಾಳುವ 70 ಗ್ರಾಂ ತೂಕದ ಬಂಗಾರದ ಆಭರಣಗಳು, 38,400 ರೂ. ಬೆಳೆಬಾಳುವ 890 ಗ್ರಾಂ ತೂಕದ ಬೆಳ್ಳಿಯ ಒಡವೆ ಮತ್ತು ಒಂದು ಬೈಕ್ ಸೇದಂತೆ ಒಟ್ಟು 4,01,400 ರೂ ಬೆಳೆಬಾಳುವ ಸಾಮಾನು ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿ ಅರೋಪಿಗಳನ್ನು ಬಂಧಿಸಿದ ಪೋಲಿಸರ ತಂಡಕ್ಕೆ ಎಸ್‌ಪಿ ರಾಮ್ ಎಲ್. ಅರಸಿದ್ದಿ ಅವರು ವಿಷೇಶ ಬಹುಮಾನ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News