ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು: ಜೈರಾಂ ರಮೇಶ್‌

Update: 2024-06-04 09:28 GMT

ಜೈರಾಂ ರಮೇಶ್‌ | Photo: PTI

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ನಡುವೆ ಬಿಜೆಪಿ ಇನ್ನೂ ಬಹುಮತ ಸಂಖ್ಯೆಯನ್ನು ತಲುಪದೇ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಆಗ್ರಹಿಸಿದ್ದಾರೆ.

“ಅವರು ತಮ್ಮನ್ನು ಅಸಾಮಾನ್ಯರೆಂಬಂತೆ ಬಿಂಬಿಸುತ್ತಿದ್ದರು. ನಿರ್ಗಮನ ಪ್ರಧಾನಿ ಮಾಜಿ ಆಗಲಿದ್ದಾರೆಂಬುದು ಸಾಬೀತಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ. ಇದು ಈ ಚುನಾವಣೆಯ ಸಂದೇಶ,” ಎಂದು ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News