ಲೋಕಸಭೆಯಿಂದ ಉಚ್ಚಾಟನೆ ಮಾಡಿದ್ದಕ್ಕೆ ಗೆಲುವೇ ತಕ್ಕ ಉತ್ತರ: ಮಹುವಾ ಮೊಯಿತ್ರಾ

Update: 2024-04-02 07:50 GMT

ಮಹುವಾ ಮೊಯಿತ್ರಾ | Photo: PTI 

ಕೋಲ್ಕತ್ತಾ: ಕೃಷ್ಣಾನಗರ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಅಂತರದ ಗೆಲುವಿನ ವಿಶ್ವಾತಸ ವ್ಯಕ್ತಪಡಿಸಿರುವ ಹಿರಿಯ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ನನ್ನನ್ನು ಲೋಕಸಭೆಯಿಂದ ಉಚ್ಚಾಟಿಸಲು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಂದ ದಾಳಿ ಹಾಗೂ ಸಮನ್ಸ್ ಜಾರಿಗೊಳಿಸುವ ಮೂಲಕ ನನ್ನ ವಿಶ್ವಾನಸಾರ್ಹತೆಗೆ ಧಕ್ಕೆ ತರಲು ನಡೆದ ಪಿತೂರಿಗೆ ಈ ಗೆಲುವು ತಕ್ಕ ಉತ್ತರವಾಗಲಿದೆ ಎಂದು ಹೇಳಿದ್ದಾರೆ.

ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಕೊನೆ ಮೊಳೆ ಹೊಡೆಯುವ ಬಿಜೆಪಿಯ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಫ್ಯಾಸಿಸ್ಟ್ ಗಳು ನಾಶಪಡಿಸಲಾದ ಅದ್ಭುತ ದೇಶ ಭಾರತವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ವರ್ಷ ಲೋಕಸಭೆಯಿಂದ ಉಚ್ಚಾಟನೆಗೊಂಡ ನಂತರ ಕೃಷ್ಣಾನಗರ ಲೋಕಸಭಾ ಕ್ಷೇತ್ರಕ್ಕೆ ಮಹುವಾ ಮೊಯಿತ್ರಾರನ್ನೇ ಟಿಎಂಸಿ ತನ್ನ ಅಭ್ಯರ್ಥಿಯನ್ನಾಗಿ ಅಯ್ಕೆ ಮಾಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 60,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಮಹುವಾ ಮೊಯಿತ್ರಾ, ಚಲಾವಣೆಯಾಗಿದ್ದ ಮತಗಳ ಪೈಕಿ ಶೇ. 45ರಷ್ಟು ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News