ʼಪ್ರೀತಿಸಲು ಹುಡುಗಿ ಸಿಗುತ್ತಿಲ್ಲʼ ಎಂದು ವಾಟ್ಸಾಪ್ ಸ್ಟೇಟಸ್‌ ನಲ್ಲಿ ಬರೆದು ಯುವಕ ನಾಪತ್ತೆ

Update: 2024-08-31 17:24 GMT

 ಜಯದೀಪ್ (24)

ಶಿವಮೊಗ್ಗ: ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ ಎಂದು ವಾಟ್ಸಾಪ್ ಸ್ಟೇಟಸ್‌ ನಲ್ಲಿ ಬರೆದು 24 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.

ತೀರ್ಥಹಳ್ಳಿಯ ಜಯದೀಪ್ (24) ಎಂಬ ಯುವಕ, ನನಗಿಂತ ಸಣ್ಣವರಿಗೆ ಪ್ರೀತಿಸಲು ಹುಡುಗಿರಿದ್ದಾರೆ. ಆದರೆ ನನಗೆ ಹುಡುಗಿಯೇ ಇಲ್ಲ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದಿಟ್ಟು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಈ ಮಧ್ಯೆ ಯುವಕ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಂಗಾ ನದಿ ಸಮೀಪ ಯುವಕನ ಬೈಕ್ ಪತ್ತೆಯಾಗಿದೆ. ಯುವಕನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೂರು ವರ್ಷಗಳಿಂದ ಬದುಕು ಉಪ್ಪಿಲ್ಲದ ಊಟದಂತೆ ಆಗಿದೆ, ಎಂದು ಯುವಕ ಸ್ಟೇಟಸ್ ನಲ್ಲಿ ಉಲ್ಲೇಖ ಮಾಡಿದ್ದಾನೆ. ಏಕಮುಖ ಪ್ರೀತಿ ಮಾಡಿ ಹುಡುಗಿಗೆ ತಿಳಿಸಿದಾಗ, ಆ ಹುಡುಗಿ ಪ್ರೀತಿ ನಿರಾಕರಿಸಿದಳು. ಇದರಿಂದ ನನಗೆ ಪ್ರೀತಿ ಮಾಡಲು ಹುಡುಗಿ ಸಿಗುತ್ತಿಲ್ಲ ಎಂದು ಬೇಸರ ಹೊರಹಾಕಿರುವ ಜಯದೀಪ್, ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ. ಜೊತೆಗೆ ಮನಿ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ 90000 ರೂ. ಹಣ ಕಳೆದುಕೊಂಡಿದ್ದೇನೆ. ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿರುವ ಯುವಕ, ತಂದೆ ತಾಯಿ ಬಳಿ ಕ್ಷಮೆ ಕೋರಿರುವ ಬಗ್ಗೆ ಸ್ಟೇಟಸ್ನಲ್ಲಿ ಉಲ್ಲೇಖಿಸಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News