ತುಮಕೂರು: ಸಿದ್ದಗಂಗಾ ಮಠದ ಗೋಕಟ್ಟೆಗೆ ಬಿದ್ದು ಇಬ್ಬರು ಮಕ್ಕಳ ಸಹಿತ ನಾಲ್ವರು ನೀರುಪಾಲು

Update: 2023-08-13 12:49 GMT

ತುಮಕೂರು: ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿರುವ ಗೋಕಟ್ಟೆಗೆ (ಕೃಷಿ ಹೊಂಡದಂತಹ ನೀರಿನ ತೊಟ್ಟಿ) ಬಿದ್ದು ನಾಲ್ವರು ನೀರುಪಾಲಾದ ಘಟನೆ ನಡೆದಿದೆ.

ಲಕ್ಷ್ಮಿ (33), ಮಹದೇವಪ್ಪ (44), ಹರ್ಷಿತ್‌ (12), ಚಿಕ್ಕಬಳ್ಳಾಪುರದ ಶಂಕರ್‌ (12) ಮೃತಪಟ್ಟವರು.

ಬಾಲಕರಾದ ಶಂಕರ್, ಹರ್ಷಿತ್, ರಂಜಿತ್ ಮಠದಲ್ಲಿ 6 ನೇ ತರಗತಿ ಓದುತ್ತಿದ್ದರು. ರಂಜಿತ್ ತಾಯಿ ಲಕ್ಷ್ಮೀ ಮಗನನ್ನು ಭೇಟಿಯಾಗಲು ಬಂದಿದ್ದರು.

ರಂಜಿತ್‌ ನೀರಿನ ಹೊಂಡಕ್ಕೆ ಇಳಿದಿದ್ದು, ಆತನ ಬೆನ್ನಲ್ಲೇ ಹರ್ಷಿತ್, ಶಂಕರ್ ನೀರಿಗೆ ಇಳಿದಿದ್ದಾರೆ. ಈಜಲು ಬಾರದಿರುವುದರಿಂದ ಮುಳುಗಿದ್ದು ಇದನ್ನು ಕಂಡ ಲಕ್ಷ್ಮೀ ಅವರು ನೀರಿಗೆ ಇಳಿದಿದ್ದಾರೆ. ಸ್ಥಳದಲ್ಲೇ ಇದ್ದ ಮಹದೇವಪ್ಪ ಎಂಬವರು ಕೂಡಾ ನೀರಿಗೆ ಇಳಿದಿದ್ದಾರೆ.

ರಂಜಿತ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದ ನಾಲ್ಕು ಮಂದಿ ನೀರಿನಲ್ಲಿ ಮುಳುಗಿದ್ದಾರೆ. ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಇನ್ನುಳಿದ ಇಬ್ಬರಿಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News