ಜೈಲಿನಲ್ಲಿ ದರ್ಶನ್ ಭೇಟಿಯಾದ ತಾಯಿ ಮೀನಾ, ಕುಟುಂಬಸ್ಥರು

Update: 2024-09-19 14:03 GMT

ಬೆಂಗಳೂರು/ಬಳ್ಳಾರಿ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ, ಬಾವ ಮಂಜುನಾಥ್‌ ಸೇರಿ ಐದು ಜನ ಕುಟುಂಬಸ್ಥರು ಗುರುವಾರ ಭೇಟಿಯಾಗಿದ್ದಾರೆ.

ಸೆ.19ರ ಗುರುವಾರ ಬೆಳಗ್ಗೆ 11.34ಕ್ಕೆ ಜೈಲು ಸಿಬ್ಬಂದಿ ಹೈ ಸೆಕ್ಯೂರಿಟಿ ಸೆಲ್ ವಿಸಿಟಿಂಗ್ ರೂಮ್‍ಗೆ ದರ್ಶನ್ ಅವರನ್ನು ಕರೆತಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್ ಜೊತೆ ಅವರು ಮಾತುಕತೆ ನಡೆಸಿದರು.

ತಾಯಿ, ಅಕ್ಕನ ಕಂಡು ದರ್ಶನ್ ಭಾವುಕರಾದರು. ಕುಟುಂಬಸ್ಥರು ಸಹ ದರ್ಶನ್ ಸ್ಥಿತಿ ಕಂಡು ಭಾವುಕರಾದರು. ಇದೇ ವೇಳೆ ತಂದಿದ್ದ ಬಟ್ಟೆ, ಬೇಕರಿ ತಿನಿಸುಗಳನ್ನು ದರ್ಶನ್‍ಗೆ ನೀಡಲಾಯಿತು ಎಂದು ಕಾರಾಗೃಹದ ಮೂಲಗಳು ತಿಳಿಸಿವೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News