ದಾವಣಗೆರೆ: ತಂದೆ ಕೊಲೆ ಮಾಡಿದ ಮಗನಿಗೆ 6 ವರ್ಷ ಜೈಲು

Update: 2023-08-04 05:04 GMT

ಸಾಂದರ್ಭಿಕ ಚಿತ್ರ

ದಾವಣಗೆರೆ : ಕುಡಿಯಲು ಹಣ ನೀಡಲಿಲ್ಲ ಎಂದು ಕೋಪಗೊಂಡು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ ಮಗ ನರಸಿಂಹಪ್ಪನಿಗೆ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಘಟನೆ ವಿವರ :

ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಏಪ್ರಿಲ್ 7. 2023 ರಂದು ತನ್ನ ತಂದೆ ಮಂಜಪ್ಪ ತನಗೆ ಕುಡಿಯಲು ನೀಡಲಿಲ್ಲ ಎಂದು ತಲೆಯ ಮೇಲೆ‌ ಕಲ್ಲು ಕೊಲೆ ಮಾಡಿದ್ದ ಈ ಸಂಬಂದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:75/2022 ಕಲಂ 504,323,324,302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಘನ 01ನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಪತ್ರ ಸಲ್ಲಿಸಿದ್ದು, ಘನ ನ್ಯಾಯಾಲಯದ ಎಸ್‌ಸಿ ನಂ:129/2022 ರಲ್ಲಿ ಪ್ರಕರಣದ ವಿಚಾರಣೆ ನೆಡೆಸಿ ದಿನಾಂಕ:02/08/2023 ರಂದು ಕಲಂ 235(2) ಸಿಆರ್‌ಪಿಸಿ ಅಡಿಯಲ್ಲಿ ಆರೋಪಿಯಾದ ನರಸಿಂಹಪ್ಪ ಬಿನ್ ಮಂಜಪ್ಪ ಈತನಿಗೆ 6 ವರ್ಷಗಳ ಶಿಕ್ಷೆ ಮತ್ತು 10,000/- ರೂ ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ 03 ತಿಂಗಳ ಹೆಚ್ಚುವರಿ ಸಾಧಾ ಶಿಕ್ಷೆ ವಿಧಿಸಿ ಘನ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಾನಂದ ತೀರ್ಪು ನೀಡಿದ್ದಾರೆ.

ಈ ಹಿಂದೆ ಹೊನ್ನಾಳಿ ವೃತ್ತ ನಿರೀಕ್ಷಕರಾಗಿದ್ದ ಟಿ.ವಿ ದೇವರಾಜ್ ರವರು ಸದರಿ ಪ್ರಕರಣದ ತನಿಖೆಯನ್ನು ಕೈಗೊಂಡು ಘನ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸತೀಶ್, ಸರ್ಕಾರಿ ಅಭಿಯೋಜಕರು ಅವರು ವಾದ ಮಂಡಿಸಿದ್ದಾರೆ.

.ಕೊಲೆ ಪ್ರಕರಣದ ಆರೋಪಿಗೆ ಶಿಕ್ಷೆ ಆಗುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್, ಐಪಿಎಸ್, ರವರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News