ದಾವಣಗೆರೆ: ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಮೃತ್ಯು

Update: 2023-09-28 15:38 GMT

ದಾವಣಗೆರೆ, ಸೆ.28: ಹರಿಹರ ತಾಲೂಕಿನ ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಅಪ್ಪ –ಮಗ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ. 

ಮಿಟ್ಲಕಟ್ಟೆ ಗ್ರಾಮದ ಚಂದ್ರಪ್ಪ(42), ಶೌರ್ಯ(9) ಮೃತರು ಎಂದು ತಿಳಿದು ಬಂದಿದೆ.

ದೇವರ ಬೆಳೆಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಚಂದ್ರಪ್ಪ ಅವರ ಪುತ್ರರಾದ ಶೌರ್ಯ ಮತ್ತು ಅಥರ್ವ ಇಬ್ಬರು ಸ್ನಾನ ಮಾಡುತ್ತಿರುವ ಏಕಾಏಕಿ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ಇಬ್ಬರು ಮುಳುಗಿದ್ದಾರೆ. ಈ ವೇಳೆ ತಂದೆ ಚಂದ್ರಪ್ಪ ಈಜುತ್ತಾ ನೀರಿನ ಸುಳಿಗೆ ಸಿಲುಕಿದ್ದ ಇಬ್ಬರು ಪುತ್ರರಲ್ಲಿ ಓರ್ವ ಪುತ್ರನನ್ನು ದಡಕ್ಕೆ ತಂದು ಬಿಟ್ಟಿದ್ದಾರೆ. ಇನ್ನೊಬ್ಬ ಪುತ್ರನನ್ನು ಕಾಪಾಡುವ ವೇಳೆ ಪುತ್ರನೊಂದಿಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಶವ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News