"ನೀವು ಮೊದಲು ಗಡಿಪಾರಿನಿಂದ ಪಾರಾಗಿ": ಶ್ರೀರಾಮುಲು ಹೇಳಿಕೆಗೆ ಹರಿಪ್ರಾಸಾದ್ ತಿರುಗೇಟು

Update: 2024-01-06 07:08 GMT

ಬೆಂಗಳೂರು: "ಶ್ರೀರಾಮುಲು ಅವರೇ, ನನ್ನನ್ನು ಗಡಿಪಾರು ಮಾಡಲು ಒತ್ತಾಯಿಸುವ ಬದಲು, ನೀವೇ ಗಡಿಪಾರಿನಿಂದ ಮೊದಲು ಪಾರಾಗಿ" ಎಂದು ಕಾಂಗ್ರೆಸ್‌ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ʼಎಕ್ಸ್‌ʼ ನಲ್ಲಿ ಬರೆದುಕೊಂಡಿರುವ ಅವರು, ʼಚುನಾವಣೆಯಲ್ಲಿ ನೀವೇ ಘೋಷಿಸಿರುವಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನ ಎದುರಿಸುತ್ತಿದ್ದೀರಿ. ರಾಜ್ಯದ ಬೊಕ್ಕಸಕ್ಕೆ ದ್ರೋಹ ಮಾಡಿದ್ದೀರಿ. ಅಲ್ಲದೇ ಕಳ್ಳತನದಿಂದ ಗಣಿಗಾರಿಕೆ ಮಾಡಿ, ಸರ್ಕಾರಕ್ಕೆ ತೆರಿಗೆ ನೀಡದೆ ವಂಚಿಸಿರುವುದು ರಾಜ್ಯ ದ್ರೋಹ ಅಲ್ಲವೇʼ ಎಂದು ಪ್ರಶ್ನಿಸಿದರು.

ಕೊಲೆ,ದೊಂಬಿ ಪ್ರಕರಣ ನಡೆಸಿದ ಕಾರಣಕ್ಕೆ ಗುಜರಾತಿಗೆ ಕಾಲಿಡಬಾರದು ಎಂದು ನಿಮ್ಮ ಕೇಂದ್ರ ಗೃಹ ಸಚಿವರಿಗೆ ನ್ಯಾಯಾಲಯ ಛಿಮಾರಿ ಹಾಕಿದ್ದು ನೆನಪಿದೆಯೇ? ಇಂತಹ ಸರದಿಯ ಸಾಲಲ್ಲಿ ನಿಂತಿರುವ ನಿಮ್ಮ ಬಗ್ಗೆ ಕನಿಕರವಿದೆ ಎಂದು ಲೇವಡಿ ಮಾಡಿದರು.

ಸಾರ್ವಜನಿಕ ಜೀವನದಲ್ಲಿ ಆಡು ಭಾಷೆ, ನಾಲಿಗೆ ಹಿಡಿತದಲ್ಲಿರಬೇಕು, ಬಿಜೆಪಿಯ ನಾಯಕರು ಎಚ್ಚರಿಕೆಯಿಂದ ಮಾತಾಡಿದರೆ ಒಳಿತು ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News