ಹನೂರು | ಕಳವಾಗಿದ್ದ ವಾಹನವನ್ನು ಒಂದೂವರೆ ವರ್ಷದ ಬಳಿಕ ಪತ್ತೆ ಹಚ್ಚಿದ ಮಾಲಕ!

Update: 2023-11-12 09:50 GMT

ಚಾಮರಾಜನಗರ: ಕಳೆದ ಒಂದೂವರೆ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಕಳವಾಗಿದ್ದ ಟಾಟಾ ಏಸ್ ವಾಹನವನ್ನು ಮಾಲಕನೇ ಮಂಡ್ಯ ಜಿಲ್ಲೆಯಲ್ಲಿ ಪತ್ತೆ ಹಚ್ಚಿದ ಘಟನೆ ರವಿವಾರ ವರದಿಯಾಗಿದೆ. 

ಮಾದೇಶ್ ಎಂಬವರೇ ತಮ್ಮ ವಾಹನವನ್ನು ಪತ್ತೆ ಹಚ್ಚಿದವರು. 2022 ರ ಜುಲೈ 10 ರಂದು ಮದ್ಯ ರಾತ್ರಿ ಹನೂರು ಪಟ್ಟಣದ ಸುಮುಖ ಎಂಟರ್ ಪ್ರೆಸಸ್ ನಲ್ಲಿ ಕಿಡಿಗೇಡಿಗಳು ಒಳನುಗ್ಗಿ ಲ್ಯಾಪ್ ಟಾಪ್, ಜೆ ಎಸ್ ಡಬ್ಲೂ ಶೀಟ್ ಗಳ ಜೊತೆಗೆ ಟಾ ಟಾ ಏಸ್ ವಾಹನವನ್ನು ಕದ್ದೊಯ್ದಿದ್ದರು. ಈ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹನೂರು ಪೋಲಿಸರು ವಿಫಲರಾಗಿದ್ದರು ಎಂದು ಆರೋಪಿಸಲಾಗಿದೆ. 

ಆದರೆ, ಕಳ್ಳತನ ನಡೆದ ಒಂದೂವರೆ ವರ್ಷದ ಬಳಿಕ ಿದೀಗ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ತಮ್ಮ ವಾಹನ ಓಡಾಡುತ್ತಿರುವುದನ್ನು ಮಾದೇಶ್ ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಸಂಭಂಧ ಮಂಡ್ಯ ಜಿಲ್ಲೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News