ಕೆಪಿಸಿಸಿಗೆ ತನ್ವೀರ್ ಸೇಠ್, ಮಂಜುನಾಥ್ ಭಂಡಾರಿ ಸಹಿತ ಐವರು ಕಾರ್ಯಾಧ್ಯಕ್ಷ‌ರ ನೇಮಕ

Update: 2024-03-23 12:58 GMT

ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿ ಕೆಪಿಸಿಸಿಗೆ ಐವರು ಹೊಸ ಕಾರ್ಯಾಧ್ಯಕ್ಷ‌ರನ್ನು ಎಐಸಿಸಿ ನೇಮಿಸಿದೆ.

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್​​, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಅಲ್ಲದೆ, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವಿನಯ್‌ ಕುಮಾರ್‌ ಸೊರಕೆ , ಸಹ ಅಧ್ಯಕ್ಷರಾಗಿ ಎಲ್‌ ಹನುಮಂತಯ್ಯ, ಉಪಾಧ್ಯಕ್ಷರಾಗಿ ರಿಝ್ವಾನ್‌ ಅರ್ಶದ್‌ ಅವರನ್ನು ನೇಮಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News