ಕೆಎಸ್ಸಾರ್ಟಿಸಿ ಬಂದ್ ಆಗುವ ಸ್ಥಿತಿ ತಲುಪಲಿದೆ: ಬಸವರಾಜ ಬೊಮ್ಮಾಯಿ

Update: 2023-06-25 13:21 GMT

ಬೆಳಗಾವಿ, ಜೂ. 25: ಸೂಕ್ತ ಸಮಯಕ್ಕೆ ಸಾರಿಗೆ ಇಲಾಖೆಗೆ ಅನುದಾನ ಬಿಡುಗಡೆ ಮಾಡದೇ ಇದ್ದಲ್ಲಿ ಕೆಎಸ್ಸಾರ್ಟಿಸಿ ಬಂದ್ ಆಗುವ ಸ್ಥಿತಿ ನಿರ್ಮಾಣ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಎಪ್ರಿಲ್ ತಿಂಗಳಿನಲ್ಲಿ ಕೆಎಸ್ಸಾರ್ಟಿಸಿಗೆ ಡಿಸೇಲ್ ಖರೀದಿಸಲು 800 ಕೋಟಿ ರೂ.ಬಿಡುಗಡೆ ಮಾಡಿದ್ದೇನೆ. ನಿರ್ವಾಹಕರು ಹಣ ತಂದರೆ ಮಾತ್ರ ಡಿಸೇಲ್ ಹಾಕಿಸಿ ಬಸ್ ಓಡಿಸುವ ಪರಿಸ್ಥಿತಿ ಇದೆ. ಹೀಗಿರುವಾಗ, ಉಚಿತ ಎಂದರೆ ಮುಂದೆ ಏನಾಗಬಹುದು ಎಂದೂ ಯೋಚನೆ ಮಾಡಿ. ಖಚಿತವಾಗಿ ಕೆಎಸ್ಸಾರ್ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಲಿದೆ ಎಂದರು.

ಒಂದೇ ತಿಂಗಳಲ್ಲಿಸರಕಾರ ಜನಪ್ರಿಯತೆ ಕಳೆದುಕೊಂಡಿದ್ದು ಇದೇ ಮೊದಲು. ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ. ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ. ಅದು ಅಲ್ಲದೆ, ಸರಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಬಣ್ಣ ಬಯಲು ಆಗಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News