ಮೈಸೂರು |‌ ರೈತರ ಟ್ರ್ಯಾಕ್ಟರ್ ಅಡವಿಟ್ಟು ವಂಚನೆ: ಆರೋಪಿಯ ಬಂಧನ

Update: 2023-08-23 04:53 GMT

ಹುಣಸೂರು, ಆ.23: ರೈತರಿಂದ ಟ್ರ್ಯಾಕ್ಟರ್ ಬಾಡಿಗೆಗೆ ಪಡೆದು ಬಳಿಕ ಅದನ್ನು ಅಡವಿಟ್ಟು ಹಣ ಪಡೆದು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ತಾಲೂಕಿನ ಹನಗೂಡು ಹೊಬಳಿ ಗಾಣನಕಟ್ಟೆ ಕಾಲನಿಯ ನಂದೀಶ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಆರೋಪಿ ನಂದೀಶ್‌ ನಗರದ ಹಲವು ರೈತರಿಂದ ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆದು, ಬಳಿಕ ಅದನ್ನು ಬೇರೆಯವರ ಬಳಿ ಹಣಕ್ಕಾಗಿ ಅಡವಿಟ್ಟು ಪರಾರಿಯಾಗುತ್ತಿದ್ದ ಎನ್ನಲಾಗಿದೆ.

ನಂದೀಶ್‌ ಹಲವು ರೈತರಿಗೆ ಈ ರೀತಿಯಾಗಿ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ದಾಖಲಾತಿ ಇರುವ ನಾಲ್ಕು ಟ್ರ್ಯಾಕ್ಟರ್ ಮಾಲಕರು ನೀಡಿದ ದೂರು ದಾಖಲಾಗಿದೆ. ಟ್ರ್ಯಾಕ್ಟರ್‌ನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News