ಮೈಸೂರು | ಮಹಿಷ ದಸರಾಕ್ಕೆ ಕ್ಷಣಗಣನೆ: ಅಶೋಕಪುರಂ ಪಾರ್ಕ್ ಬಳಿ ಜನ ಜಮಾವಣೆ

Update: 2023-10-13 04:00 GMT

ಮೈಸೂರು, ಅ.13: ವಿವಾದ ನಡುವೆ ಮಹಿಷ ದಸರಾ ಆಚರಣೆಗೆ ಮುಂದಾಗಿರುವ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು ನಗರದ ಅಶೋಕಪುರಂ ನ ಅಂಬೇಡ್ಕರ್ ಪಾರ್ಕ್ ಬಳಿ ಜಮಾವಣೆಗೊಳ್ಳುತ್ತಿದ್ದಾರೆ.

ಪೊಲೀಸರು ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನಲೆಯಲ್ಲಿ ನಗರದ ಪುರಭವನದ ಆವರಣದಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಸ್ಥಳಕ್ಕೆ ತೆರಳುವ ಮುನ್ನ ಅಶೋಕಪುರಂ ಪಾರ್ಕ್ ಬಳಿ ಸಾರ್ವಜನಿಕರು ಸಮಾವೇಶಗೊಳ್ಳುತ್ತಿದ್ದಾರೆ.

ಇಲ್ಲಿಂದ ನೇರವಾಗಿ ಪುರಭವನದ ಆವರಣಕ್ಕೆ ತೆರಳಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಊರು, ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಈಗಾಗಲೇ ಪುರಭವನದ ಬಳಿಗೂ ಜನ ಆಗಮಿಸುತ್ತಿದ್ದಾರೆ.

ಅಶೋಪುರಂನ ಪಾರ್ಕ್ ನಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎಲ್ಲರೂ ತೆರಳಲಿದ್ದಾರೆ.

ಇಂದು ಬೆಳಗ್ಗೆ 10ರಿಂದ 12 ಗಂಟೆಯ ವರೆಗೆ ಮಾತ್ರ ಕಾರ್ಯಕ್ರಮ ಆಯೋಜಿಸಲು ಸಂಘಟಕರಿಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News