ನಿಗದಿತ ಅವಧಿಗೆ ಸದನಕ್ಕೆ ಬಂದ ಶಾಸಕರಿಗೆ ಬಹುಮಾನ: ಸ್ಪೀಕರ್ ಖಾದರ್ ಘೋಷಣೆ

Update: 2023-07-05 08:49 GMT

ಬೆಂಗಳೂರು: ನಿಗದಿತ ಅವಧಿಗೆ ಸದನಕ್ಕೆ ಬಂದ ಶಾಸಕರಿಗೆ ಬಹುಮಾನ ನೀಡುವುದಾಗಿ ಸ್ಪೀಕರ್ ಯು.ಟಿ ಖಾದರ್ ಘೋಷಣೆ ಮಾಡಿದ್ದಾರೆ. 

ಬುಧವಾರ ಸದನ ಆರಂಭ ಆಗುತ್ತಿದ್ದಂತೆ ನಿನ್ನೆ (ಮಂಗಳವಾರ) ಸದನಕ್ಕೆ ನಿಗದಿತ ಸಮಯದಲ್ಲಿ ಆಗಮಿಸಿದ ಶಾಸಕರ ಹೆಸರು ಓದಿದ ಸ್ಪೀಕರ್, ದರ್ಶನ್ ಪುಟ್ಟಣ್ಣಯ್ಯ, ಕೌಜಳಜಿ ಮಹಾಂತೇಶ್, ಎಸ್ ಸುರೇಶ್ ಕುಮಾರ್, ಪ್ರದೀಪ್ ಈಶ್ವರ್, ಎಸ್ ಆರ್ ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಶಿವಲಿಂಗೇಗೌಡ ಸೇರಿದಂತೆ ನಿಗದಿತ ಸಮಯಕ್ಕೆ ಆಗಮಿಸಿದ ಶಾಸಕರ ಬಗ್ಗೆ ಮೆಚ್ಚುಗೆ ಸೂಚಿಸಿದರು. 

ಈ ವೇಳೆ  ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ ಶಾಸಕರಿಗೆ ಬಹುಮಾನ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ ಎಂದು ಸ್ಪೀಕರ್ ಖಾದರ್ ಗೆ ಶಾಸಕರೊಬ್ಬರು ಸಲಹೆ ಕೊಟ್ಟರು.

ಬಹುಮಾನ ಘೋಷಣೆ ಬದಲಾಗಿ ಸರ್ಟಿಫಿಕೇಟ್ ಕೊಡಬಹುದು. ಬಹುಮಾನ ಎಂದರೆ ತಪ್ಪು ಸಂದೇಶ ಹೋಗುತ್ತದೆ. ಬದಲಾಗಿ ಪ್ರಮಾಣ ಪತ್ರ ನೀಡಿ ಎಂದು ಶಾಸಕ ನಾಡಗೌಡ ಸೇರಿ ಕೆಲವರು ಮನವಿ ಮಾಡಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News