ರಮೇಶ್ ಜಾರಕಿಹೊಳಿ ಭೇಟಿ ಬಗ್ಗೆ ಜಗದೀಶ್‌ ಶೆಟ್ಟರ್‌ ಹೇಳಿದ್ದೇನು ?

Update: 2023-10-17 12:02 GMT

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮನ್ನು ಭೇಟಿಯಾಗಿರುವ ಬಗ್ಗೆ ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ. 

ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್‌, ʼʼಇತ್ತೀಚೆಗೆ ಬಹಳ ಜನರು ಭೇಟಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಸಹ ಭೇಟಿಯಾಗಿದ್ದಾರೆ. ಆದರೆ ಇವತ್ತು ಭೇಟಿಯಾಗಿಲ್ಲʼʼ ಎಂದು ಸ್ಪಷ್ಟಪಡಿಸಿದರು. 

ʼʼಎರಡು ತಿಂಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಬಂದವರಿಗೆ ಬೇಡ ಅಂತ ಹೇಳಲು ಆಗಲ್ಲ, ಬೇರೆ ಕಡೆ ಹೋದಾಗ ಹಳೆ ಸಂಬಂಧ ಇರುವುದರಿಂದ ಭೇಟಿಯಾಗಿರುತ್ತೇನೆ. ಅವರ ಬಳಿ ರಾಜಕೀಯವಾಗಿ ನಾನು ಚರ್ಚೆ ಮಾಡಿಲ್ಲ, ಅವರು ಸಹ ಆ ಪ್ರಯತ್ನ ಮಾಡಿಲ್ಲ.ಇದು ಸಹಜ ಭೇಟಿ ಅಷ್ಟೇʼʼ ಎಂದು ತಿಳಿಸಿದರು. 

ʼʼಬಿಜೆಪಿಗೆ ವಾಪಸ್ ಹೋಗಲ್ಲʼʼ

 ʼʼಕಾಂಗ್ರೆಸ್ ಗೆ ಬಂದಾಗ ಬಿಜೆಪಿಗೆ ವಾಪಸ್ ಹೋಗಬಾರದು ಎಂಬ ನಿರ್ಧಾದಿಂದಲೇ ಬಂದಿದ್ದೇನೆ. ನನ್ನನ್ನು ಯಾರು ಕಾಂಗ್ರೆಸ್ ನಿಂದ ಬಿಜೆಪಿ ಬನ್ನಿ ಅಂತ ಯಾರು ಹೇಳಿಲ್ಲʼʼ ಎಂದು ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News