ಮಳೆ-ಗಾಳಿ: ಉಡುಪಿ ಜಿಲ್ಲೆಯಲ್ಲಿ 10 ಮನೆಗಳಿಗೆ ಹಾನಿ

Update: 2024-07-10 16:05 GMT

ಉಡುಪಿ, ಜು.10: ಗಾಳಿ-ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ 10 ಮನೆಗಳಿಗೆ ಹಾನಿಯಾಗಿದ್ದು 2.50ಲಕ್ಷ ರೂ.ಗಳಿಗೂ ಅಧಿಕ ನಷ್ಟದ ವರದಿ ಬಂದಿವೆ.

ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಭಾಸ್ಕರ ಖಾರ್ವಿ, ಬೆಳ್ಳಾಲ ಗ್ರಾಮದ ಚಿಕ್ಕಯ್ಯ ಶೆಟ್ಟಿ, ವಕ್ವಾಡಿ ಗ್ರಾಮದ ಮಾಸ್ತಿ ಹಾಗೂ ಶಂಕರ ಕುಲಾಲ ಇವರ ಮನೆಗಳಿಗೆ ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಲಕ್ಷ್ಮಣ ಕುಂದರ್, ಶೀನ ನಾಯ್ಕ, ವಾಸುದೇವ ಶೆಟ್ಟಿಗಾರ್, ಸತೀಶ್ ಕುಂದರ್ ಹಾಗೂ ಮರ್ಣೆ ಗ್ರಾಮದ ಆನಂದ ಪೂಜಾರಿ ಇವರ ಮನೆಗಳಿಗೆ 1.5 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಇನ್ನು ಬೈಂದೂರು ಗ್ರಾಮದ ಪಡುವರಿಯ ನಾರಾಯಣ ಇವರ ಮನೆಯ ಗೋಡೆ ಕುಸಿದು 30,000ರೂ.ನಷ್ಟವಾಗಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 18.8ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 27.5, ಕಾಪುವಿನಲ್ಲಿ 23.6, ಬ್ರಹ್ಮಾವರ 23.1, ಕುಂದಾಪುರ 23.1, ಹೆಬ್ರಿಯಲ್ಲಿ 17.8, ಕುಂದಾಪುರ 14.4 ಹಾಗೂ ಬೈಂದೂರಿನಲ್ಲಿ 11.5ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News