ಉಡುಪಿ: ಲಯನ್ಸ್ ಜಿಲ್ಲೆ 317ಸಿ ನೂತನ ಕಚೇರಿ ಉದ್ಘಾಟನೆ

Update: 2024-06-11 12:50 GMT

ಉಡುಪಿ, ಜೂ.11: ಲಯನ್ಸ್ ಜಿಲ್ಲೆ 317ಸಿ ಇದರ 2024-25ನೇ ಸಾಲಿನ ನೂತನ ಕಚೇರಿಯು ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿಯ ಪ್ರೀಮಿಯರ್ ಪಾರ್ಕ್ ಕಟ್ಟಡದಲ್ಲಿ ಸೋಮವಾರ ಉದ್ಘಾಟನಗೊಂಡಿತು.

2024-25ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್ ನೂತನ ಕಚೇರಿಯನ್ನು ಉದ್ಘಾಟಿಸಿದರು. 2023-24ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಡಾ.ನೇರಿ ಕರ್ನೇಲಿಯೊ ದೀಪ ಬೆಳಗಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ವಿಲಾಸ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಲಯನ್ಸ್ ಮಾಜಿ ಜಿಲ್ಲಾ ಗವರ್ನರ್‌ಗಳಾದ ಜಯಕರ್ ಶೆಟ್ಟಿ ಇಂದ್ರಾಳಿ, ಡಾ.ಮಧು ಸೂದನ್ ಹೆಗ್ಡೆ, ವಿಶ್ವನಾಥ್ ಶೆಟ್ಟಿ, ಬಸ್ರೂರು ರಾಜೀವ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರಕಾಶ್ ಟಿ. ಸೋನ್ಸ್, ಪದಾಧಿಕಾರಿಗಳಾದ ಅರುಣ್ ಹೆಗ್ಡೆ, ಈಶ್ವರ ಚಿಟ್ಪಾಡಿ, ಗಿರೀಶ್ ರಾವ್, ವೀಣಾ ಜೆ. ಶೆಟ್ಟಿ, ಶೇಖರ್ ಶೆಟ್ಟಿ, ಶ್ರೀನಿವಾಸ್ ಪೈ, ಶಶಿಧರ್ ಶೆಟ್ಟಿ, ದಿನೇಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News