ಫೆ.18ರಿಂದ ಪರಿಚಯ-ರಂಗೋತ್ಸವ

Update: 2024-02-13 11:34 GMT

ಶಿರ್ವ: ಪಾಂಬೂರು ಪರಿಚಯ ಪ್ರತಿಷ್ಠಾನದ ಆಶ್ರಯದಲ್ಲಿ ಫೆ.18ರಿಂದ ಫೆ.24ರವರೆಗೆ ಪ್ರತಿದಿನ ಸಂಜೆ 6.30ರಿಂದ ಪರಿಚಯ- ರಂಗೋತ್ಸವವು ಪಾಂಬೂರು ರಂಗ ಪರಿಚಯದಲ್ಲಿ ನಡೆಯಲಿದೆ.

ಫೆ.18ರಂದು ಮಂಡ್ಯ ಪಾಂಡವಪುರ ದಿ.ಚಾನಲ್ ಥಿಯೇಟರ್ಸ್‌ ತಂಡದಿಂದ ಲೀಕ್ ಔಟ್(ಕನ್ನಡ), 19ರಂದು ಮಂಗಳೂರು ಅಸ್ತಿತ್ವ ತಂಡದಿಂದ ಜುಗಾರಿ (ಕೊಂಕಣಿ), ಫೆ.20ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದಿಂದ ಒಂಜಿ ದಮ್ಮಪದ(ತುಳು), ಫೆ.21ರಂದು ಸುವರ್ಣ ಪ್ರತಿಷ್ಠಾನ ಮಂಗಳೂರು ತಂಡದಿಂದ ಉರುಳು(ಕನ್ನಡ), ಫೆ.22ರಂದು ಸಂಗಮ ಕಲಾವಿದೆರ್ ಮಣಿಪಾಲ ತಂಡದಿಂದ ಮರಣ ಗೆಂದಿನಾಯೆ(ತುಳು), ಫೆ.23ರಂದು ಮಂಗಳೂರು ಅಸ್ತಿತ್ವ ತಂಡದಿಂದ ದಾದ್ಲ್ಯಾಂ ಮಧೆಂ ತುಂ ಸದೆಂವ್(ಕೊಂಕಣಿ), ಫೆ.24ರಂದು ಸುರಭಿ ಬೈಂದೂರು ತಂಡದಿಂದ ಮಕ್ಕಳ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪರಿಚಯ ಪ್ರತಿಷ್ಠಾನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News