ಗಾಂಜಾ ಸೇವನೆ: ಐವರು ವಶಕ್ಕೆ

Update: 2023-07-31 16:08 GMT

ಕಾರ್ಕಳ, ಜು.31: ಗಾಂಜಾ ಸೇವನೆಗೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ ಗಾಂಧಿ ಮೈದಾನದ ಸಮೀಪ ತೆಳ್ಳಾರಿನ ಭುವನೇಶ(27), ಶ್ರೀಕಾಂತ(23) ಮತ್ತು ಕಾರ್ಕಳ ಬಂಗ್ಲೆಗುಡ್ಡೆ ಮಟನ್ ಸ್ಟಾಲ್ ಸಮೀಪ ತೆಳ್ಳಾರಿನ ಕಿರಣ(20), ಬಂಗ್ಲೆಗುಡ್ಡೆಯ ನಜೀರ್ ಸಾಬ್(25), ಕೋರ್ಟ್ ಬಳಿಯ ಅಭಯ್(21) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿ ರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News