ಕುಂದಾಪುರ: ಟಿಪ್ಪರ್ ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Update: 2024-03-02 06:50 GMT

ಕುಂದಾಪುರ, ಮಾ.2: ಹಿಂದಕ್ಕೆ ಚಲಿಸಿದ ಟಿಪ್ಪರ್‌  ಮತ್ತು ಗೇಟಿನ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡ  ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಸೋಡು ಎಂಬಲ್ಲಿ ಶುಕ್ರವಾರ ನಡೆದಿದೆ.

 ಮೃತರನ್ನು ಅಸೋಡು ಗ್ರಾಮದ ರಾಘವೇಂದ್ರ (42) ಎಂದು ಗುರುತಿಸಲಾಗಿದೆ. ಮನೆಯ ಬಾವಿಯ ಆವರಣ ನಿರ್ಮಿಸಲು ಟಿಪ್ಪರ್ ಲಾರಿಯಲ್ಲಿ ತಂದಿದ್ದ ಮರಳನ್ನು ಮನೆಯ ಅಂಗಳದಲ್ಲಿ ಮರಳನ್ನು ಇಳಿಸಲು ಟಿಪ್ಪರ್ ಚಾಲಕನಿಗೆ ರಾಘವೇಂದ್ರ ತಿಳಿಸಿದರು. ಆದರೆ ಚಾಲಕ ಟಿಪ್ಪರನ್ನು ಒಮ್ಮೆಲೆ ಹಿಂದಕ್ಕೆ ಚಲಾಯಿಸಿದ ಪರಿಣಾಮ ಟಿಪ್ಪರ್ ಹಿಂದೆ ನಿಂತಿದ್ದ ರಾಘವೇಂದ್ರ, ಟಿಪ್ಪರ್ ಹಾಗೂ ಮನೆಯ ಗೇಟಿನ ಪಿಲ್ಲರ್ ಮಧ್ಯೆ ಸಿಲುಕಿಕೊಂಡರು ಎನ್ನಲಾಗಿದೆ.

ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರು, ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News