ಕುಂದಾಪುರ: ಧರೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು; ಅಪಾಯದಿಂದ ಪಾರಾದ ಶಾಲಾ ಬಸ್ !

Update: 2024-07-13 07:32 GMT

ಕುಂದಾಪುರ, ಜು.13: ಬೃಹತ್ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಅಲ್ಲೇ ಸಂಚರಿಸುತ್ತಿದ್ದ ಶಾಲಾ ಬಸ್ಸೊಂದು ಅದೃಷ್ಟವಶಾತ್ ಸ್ವಲ್ಪದರಲ್ಲಿಯೇ ಪಾರಾದ ಘಟನೆ ಹೆಮ್ಮಾಡಿ ಗ್ರಾಮದ ಸಂತೋಷ್ ನಗರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಭಾರೀ ಗಾಳಿ ಮಳೆಗೆ ಬೃಹತ್ ಮರವೊಂದು ಧರೆಗೆ ಉರುಳಿದ್ದು, ಇದರ ಪರಿಣಾಮ ವಿದ್ಯುತ್ ಕಂಬಗಳೊಂದಿಗೆ ತಂತಿಗಳು ಕೂಡ ನೆಲಕ್ಕೆ ಬಿದ್ದಿದೆ. ಇದರಿಂದ ಇಲ್ಲಿನ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಶಾಲಾ ಬಸ್ಸೊಂದು ಮರ ಬಿದ್ದ ಕೇವಲ 20 ಮೀ. ದೂರದಲ್ಲಿತ್ತೆನ್ನಲಾಗಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಬಂದಿದ್ದು, ಸ್ಥಳೀಯರ ಸಹಾಕಾರದೊಂದಿಗೆ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News