ಕುಂದಾಪುರ: ಬೆಳೆ ಸಮೀಕ್ಷೆಗೆ ಹೋದ ವಿಎ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಆರೋಪ

Update: 2023-09-28 16:44 GMT

ಕುಂದಾಪುರ, ಸೆ.28: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗುರುವಾರ ದಂದು ಬೆಳೆ ಸಮೀಕ್ಷೆಗೆ ತೆರಳಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಸುವರ್ಣ ಅವರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆ ನಡೆಸಿದ್ದಾಗಿ ಜಪ್ತಿ ಸಮೀಪದ ಶ್ರೀನಾಥ್ ಉಡುಪ ಎಂಬಾತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳೆ ಸಮೀಕ್ಷೆಗೆಂದು ತಹಶೀಲ್ದಾರ್ ಕಚೇರಿಯಿಂದ ನಿಯೋಜನೆಗೊಂಡ (ಪಿ.ಆರ್.ಒ) ಮಧುರ್ ಎನ್ನುವವರು ಸಮೀಕ್ಷೆಗಾಗಿ ಹೋದಾಗಲೂ ಮಧುರ್ ಮೇಲೆ ಕೂಡ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಪ್ರತಿದೂರು: ತಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸತೀಶ್ ಮಡಿವಾಳ ಹಾಗೂ ಇನ್ನೋರ್ವ ವ್ಯಕ್ತಿ ಅವ್ಯಾಚವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾಗಿ ಶ್ರೀನಾಥ ಉಡುಪ ಸಹ ಪ್ರಕರಣ ದಾಖಲಿಸಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News