ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಮುಸ್ತಾಕ್ ಅಹ್ಮದ್ ಬೆಳ್ವೆ ಪುನರಾಯ್ಕೆ

Update: 2023-11-22 10:35 GMT

ಮುಸ್ತಾಕ್ ಅಹ್ಮದ್

ಉಡುಪಿ, ನ.21: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷ ಬೆಳ್ವೆ ಮುಸ್ತಾಕ್ ಅಹ್ಮದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮುಂದಿನ ಎರಡು ವರ್ಷಗಳ ಅವಧಿಗೆ ಬೆಳ್ವೆ ಮುಸ್ತಾಕ್ ಅಹ್ಮದ್ ಅವಿರೋಧವಾಗಿ ಪುನರಾಯ್ಕೆಯಾದರು.

ಗೌರವಾಧ್ಯಕ್ಷರಾಗಿ ಬಿ.ಎಸ್.ಎಫ್.ರಫೀಕ್ ಗಂಗೊಳ್ಳಿ, ಜಿಲ್ಲಾ ಸಂಯೋಜಕರಾಗಿ ಶೈಖ್ ವಾಹಿದ್, ಜಿಲ್ಲಾ ಹಿರಿಯ ಉಪಾಧ್ಯಕ್ಷರಾಗಿ ಎಸ್.ದಸ್ತಗೀರ್ ಕಂಡ್ಲೂರ್, ಪ್ರಧಾನ ಕಾರ್ಯದರ್ಶಿಯಾಗಿ ಝಹಿರ್ ಅಹ್ಮದ್ ನಾಕುದ ಗಂಗೊಳ್ಳಿ, ಖಜಾಂಚಿಯಾಗಿ ನಕ್ವಾ ಯಹ್ಯಾ ಉಡುಪಿ, ಉಪಾಧ್ಯಕ್ಷರಾಗಿ ರಶೀದ್ ಯುಎ, ಉಸ್ತಾದ್ ಸಾದಿಕ್ ಹೂಡೆ, ಶಾಕಿರ್ ಹಾವಂಜೆ, ಅಬು ಮುಹಮ್ಮದ್ ಕುಂದಾಪುರ, ಸಯ್ಯದ್ ಅಜ್ಮಲ್ ಶಿರೂರ್, ನಝೀರ್ ಶಾ ಅಜೆಕಾರ್, ಸಂಘಟನಾ ಕಾರ್ಯದರ್ಶಿ ಫಾಝಿಲ್ ಆದಿಉಡುಪಿ, ಕ್ರೀಡಾ ಕಾರ್ಯದರ್ಶಿ ಆಶ್ರಫ್ ಪಡುಬಿದ್ರೆ, ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಅರ್ಫಾತ್ ಬೆಳ್ವೆ, ಯುವ ಘಟಕದ ಸಂಯೋಜಕರಾಗಿ ಅಬ್ದುಲ್ ಖಾದರ್ ಮೂಡ್ ಗೋಪಾಡಿ ಆಯ್ಕೆಯಾದರು.

ಜಿಲ್ಲಾ ಸಮಿತಿಯ ಸದಸ್ಯರಾಗಿ ಪೀರ್ ಮುಹಮ್ಮದ್ ಉಡುಪಿ, ಇಮ್ರಾನ್ ಹೆನ್ನಾಬೈಲ್, ಶಾಬಾನ್ ಹಂಗಳೂರ್, ನಿಹಾರ್ ಅಹ್ಮದ್, ಫಝಲ್ ಅಹ್ಮದ್ ಕಂಡ್ಲೂರ್, ಅಬೂಬಕರ್ ಮಾವಿನಕಟ್ಟೆ, ಮುಹಮ್ಮದ್ ಪಿ. ಗುಲ್ವಾಡಿ, ಉಸ್ಮಾನ್ ಪಳ್ಳಿ, ಜಮಾಲ್ ಗುಲ್ವಾಡಿ, ಅನ್ವರ್ ಕಂಡ್ಲೂರ್, ಮುಜಾಹಿದ್ ಗಂಗೊಳ್ಳಿ, ಇರ್ಫಾನ್ ಕಾಪು, ಹಮೀದ್ ಯೂಸುಫ್, ರಝಾಕ್ ಹುಸೈನ್, ಮುಸ್ತಾಕ್ ಹೆನ್ನಾಬೈಲ್, ಅನ್ಸಾರ್ ಹೊಸಂಗಡಿ, ಮುನವರ್ ಅಜೆಕಾರ್, ಆಸಿಫ್ ಅಲ್ಬಾಡಿ, ರಯಾನ್ ಬೆಳ್ವೆ, ಉಡುಪಿಯ ಉಸ್ತುವಾರಿಯಾಗಿ ನಝೀರ್ ನೇಜಾರ್, ಸಮೀರ್ ಮಣಿಪಾಲ್, ಕಾರ್ಕಳದ ಉಸ್ತುವಾರಿಯಾಗಿ ಶಿಷಾ ಹುಸೇನ್, ಮುಸ್ತಫ ಕಾರ್ಕಳ, ಸಮದ್ ಖಾನ್, ಹೆಬ್ರಿ ಉಸ್ತುವಾರಿಯಾಗಿ ಮುಹಮ್ಮದ್ ರಫೀಕ್ ಅಜೆಕಾರ್, ಅಬ್ದುಲ್ ಶುಕೂರ್ ಬೆಳ್ವೆ, ಬೈಂದೂರು ಉಸ್ತುವಾರಿಯಾಗಿ ಸಮಿ ಹಳಗೇರಿ ಅವರನ್ನು ಆಯ್ಕೆ ಮಾಡಲಾಯಿತು.

ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಪದಾಧಿಕಾರಿಗಳ ಆಯ್ಕೆಯ ವೀಕ್ಷಕರಾಗಿ ಭಾಗವಹಿಸಿದ್ದರು.

ಮೌಲಾನ ಫಝಲ್ ಅಹ್ಮದ್ ಕಂಡ್ಲೂರು ಕಿರಾಅತ್ ಪಠಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೌಲನಾ ಝಮೀರ್ ಅಹ್ಮದ್ ರಷಾದಿ ವರದಿ ಮಂಡಿಸಿದರು. ಸೈಯದ್ ಅಜ್ಮಲ್ ಲೆಕ್ಕ ಪತ್ರ ಮಂಡನೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News