ಬೆಂಕಿಯ ಹೊಗೆಗೆ ಅಸ್ವಸ್ಥಗೊಂಡ ಕೃಷಿಕ ಮೃತ್ಯು

Update: 2024-05-16 15:35 GMT

ಬ್ರಹ್ಮಾವರ, ಮೇ 16: ಕೃಷಿ ಗದ್ದೆಯಲ್ಲಿ ಸುಡು ಮಣ್ಣು ಹಾಕುತ್ತಿರುವ ವೇಳೆ ಹೊಗೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ಕೃಷಿಕರೊಬ್ಬರು ಮೃತಪಟ್ಟ ಘಟನೆ 33ನೇ ಶಿರೂರು ಗ್ರಾಮದ ಹೆಗ್ಗೇರಿ ಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಹೆಗ್ಗೇರಿ ನಿವಾಸಿ ಭುಜಂಗ(52) ಎಂದು ಗುರುತಿಸಲಾಗಿದೆ. ಇವರು ಮೇ 14ರಂದು ಮನೆಯ ತೋಟದ ಕಸವನ್ನು ರಾಶಿ ಮಾಡಿ ಮನೆಯ ಹತ್ತಿರದ ಕೃಷಿ ಗದ್ದೆಯಲ್ಲಿ ಸುಡು ಮಣ್ಣು ಹಾಕುತ್ತಿದ್ದರು. ಈ ವೇಳೆ ಬೆಂಕಿಯ ಜ್ವಾಲೆ ಜಾಸ್ತಿಯಾಗಿದ್ದು, ಬೆಂಕಿ ನಂದಿಸಲು ಹೋದ ಭುಜಂಗ ಶೆಟ್ಟಿ ಹಾಕಿದ್ದ ಪ್ಲಾಸ್ಟಿಕ್ ಬೂಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗಲಿತು.

ಇದರಿಂದ ಬೂಟು ಸುಟ್ಟು ಹೋಗಿ ಹಾಗೂ ಹೊಗೆಯಿಂದ ಪ್ರಜ್ಞೆ ಕಳೆದುಕೊಂಡು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಇವರು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೇ 16ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News