ವಾರದ ಸಂತೆ ಆಯೋಜನೆ: ಅರ್ಜಿ ಆಹ್ವಾನ

Update: 2024-05-29 16:24 GMT

ಉಡುಪಿ, ಮೇ 29: ತೋಟಗಾರಿಕೆ ಇಲಾಖೆಯ ವತಿಯಿಂದ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ರೈತ ಸೇವಾ ಕೇಂದ್ರದ ಪ್ರಾಂಗಣದಲ್ಲಿ ಸ್ಥಳೀಯ ಗ್ರಾಹಕರು/ ಸಾರ್ವಜನಿಕರಿಗೆ ಅಲ್ಲದೇ ಉಡುಪಿ ಸುತ್ತಮುತ್ತಲಿನ ನಾಗರಿಕ ರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಸಂಬಂಧಿತ ವಿವಿಧ ಸಂತೆ/ ವಾರದ ಸಂತೆ ಆಯೋಜನೆ ಮಾಡಲು ಆಸಕ್ತರು, ಸಂಘ-ಸಂಸ್ಥೆಗಳು, ರೈತರು ಹಾಗೂ ಕೃಷಿ ಸಂಬಂಧಿತ ಸಂಘಗಳು ನಿಯಮಾನುಸಾರ ಮತ್ತು ಎಪಿಎಂಸಿ ಮಾರ್ಗಸೂಚಿಗಳನ್ವಯ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು, ಉಡುಪಿ ಇವರ ಅಧೀನದ ಸಹಾಯಕ ತೋಟಗಾರಿಕೆ ನಿರ್ದೇಶಕರು, ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ, ಉಡುಪಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News