ಕಾರ್ಕಳ : ತಾಯಿ, ಮಗು ನಾಪತ್ತೆ

Update: 2024-06-12 14:55 GMT

ಕಾರ್ಕಳ: ಈದು ಗ್ರಾಮದ ವರಿಮಾರು ದರ್ಖಾಸು ನಿವಾಸಿ ಶಿವಾನಂದ ಎಂಬವರ ಪತ್ನಿ ಅಶ್ವಿನಿ ಎಸ್‌ (28) ಎಂಬವರು ಹೊಸ್ಮಾರು ಅಡಿಕೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಜೂನ್11 ರಂದು ಮಧ್ಯಾಹ್ನ ಮಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಕಿರಿಯ ಮಗ ಆಶಿಕ್‌ (7 ½ )ನನ್ನು ಜೊತೆಯಲ್ಲಿ ಕರೆದುಕೊಂಡು ಹೋದವರು ತಂಗಿಯ ಮನೆಯಾದ ಮಂಗಳೂರಿಗೆ ಹೋಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದವರ ಮಾಹಿತಿ ಸಿಕ್ಕಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವಂತೆ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News