ವಿದ್ಯುತ್ ಆಘಾತ: ಉತ್ತರ ಪ್ರದೇಶದ ಕಾರ್ಮಿಕ ಮೃತ್ಯು

Update: 2024-07-10 15:30 GMT

ಗಂಗೊಳ್ಳಿ, ಜು.10: ವಿದ್ಯುತ್ ಆಘಾತದಿಂದ ಉತ್ತರ ಪ್ರದೇಶ ಮೂಲದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮುಳ್ಳಿಕಟ್ಟೆಯ ಅರಾಟೆಯ ಬಳಿ ಜು.9ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಉತ್ತರ ಪ್ರದೇಶದ ಪಂಕಜ್ ಸಾಹು ಎಂದು ಗುರುತಿಸಲಾಗಿದೆ. ಇವರು ಪ್ರಕಾಶ್ ಆಚಾರ್ಯ ಎಂಬವರ ಬೋಟ್ ಬಿಲ್ಡಿಂಗ್‌ನಲ್ಲಿ ವೆಲ್ಡೀಂಗ್ ಕೆಲಸವನ್ನು ಮಾಡಿಕೊಂಡಿದ್ದು, ಇವರಿಗೆ ಉಳಿದುಕೊಳ್ಳಲು ಮನೆ ವ್ಯವಸ್ಥೆಯನ್ನು ಮಾಡಿಕೊಡ ಲಾಗಿತ್ತು. ಮನೆಯಲ್ಲಿ ಹೊರಗಡೆ ಲೈಟಿನ ವ್ಯವಸ್ಥೆ ಇಲ್ಲದೇ ಇದ್ದು ಪ್ರತಿದಿನ ರಾತ್ರಿ ವೇಳೆಯಲ್ಲಿ ಹೊರಗಡೆ ಹೋಗುವಾಗ ವಯರಿಗೆ ಬಲ್ಬನ್ನು ಹಾಕಿಕೊಂಡು ಪ್ಲಗ್ಗಿಗೆ ಸಿಕ್ಕಿಸಿ ಹೋಗುತ್ತಿದ್ದರು.

ಜು.9ರಂದು ರಾತ್ರಿ ಪಂಕಜ್ ಸಾಹು ಊಟ ಮಾಡಿ ಬಟ್ಟಲನ್ನು ತೊಳೆಯಲು ವಯರಿಗೆ ಬಲ್ಬನ್ನು ಹಾಕಿಕೊಂಡು ಪ್ಲಗ್ಗಿಗೆ ಸಿಕ್ಕಿಸಿ ಕೈಯಲ್ಲಿ ಹಿಡಿದು ಕೊಂಡು ಹೋಗುತ್ತಿದ್ದು, ಈ ವೇಳೆ ವಯರಿಗೆ ಮಳೆಯ ನೀರು ತಾಗಿ ಅವರಿಗೆ ವಿದ್ಯುತ್ ಶಾಕ್ ಹೊಡೆಯಿ ತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News