ಹೆಬ್ರಿಯಲ್ಲಿ ಭಾರೀ ಮಳೆಗೆ ಅಪಾರ ಹಾನಿ

Update: 2024-07-26 13:57 GMT

ಹೆಬ್ರಿ : ಹೆಬ್ರಿ ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧಾರಾಶಾಹಿಯಾಗಿದ್ದು, ಕೆಲವು ಕಡೆ ರಸ್ತೆಗೆ ಮರ ಬಿದ್ದು ಸಂಚಾರ ತಡೆಯಾಗಿರುವ ಬಗ್ಗೆ ವರದಿಯಾಗಿದೆ.

ಶಿವಪುರ ಮುಳ್ಳುಗುಡ್ಡೆಯ ಅಚ್ಚು, ಶಿವಪುರ ಕಲ್ಮುಂಡದಲ್ಲಿ ರತ್ನಾಕರ ಶೆಟ್ಟಿ, ಗುಮ್ಮೊಲ ಉದಯ ಮರಕಾಲ ಹಾಗೂ ಅಪ್ರೋಜ್ ಲೋಭ ಎಂಬವರ ಮನೆಗಳಿಗೆ ಮರ ಬಿದ್ದು ಅಪಾರ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ.

ಮಳೆಯ ಮುಂಜಾಗ್ರತಾ ಕ್ರಮವಾಗಿ ಹೆಬ್ರಿ ತಾಲೂಕಿನ ಶಾಲಾ ಕಾಲೇಜು ಗಳಿಗೆ ತಹಸೀಲ್ದಾರ್ ಎಸ್.ಎ.ಪ್ರಸಾದ್ ಇಂದು ರಜೆ ಘೋಷಣೆ ಮಾಡಿದ್ದರು. ಹಿರಿಯಡ್ಕದಿಂದ ಹೆಬ್ರಿಗೆ ಬರುವ ಮುಖ್ಯ ವಿದ್ಯುತ್ ಲೈನ್‌ನಲ್ಲಿ ದೋಷ ಉಂಟಾಗಿ ಸತತ ಎರಡನೇ ದಿನವೂ ಹೆಬ್ರಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನ ಕತ್ತಲೆಯಲ್ಲಿ ಕಳೆಯಬೇಕಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News