ಗುಲ್ವಾಡಿ: ಸಿಪಿಎಂ ಶಾಖಾ ಸಮ್ಮೇಳನ
ಕುಂದಾಪುರ, ಸೆ.17: ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಬೈಂದೂರು ವಲಯ ಸಮಿತಿ ಅಡಿಯಲ್ಲಿರುವ ಪ್ರಭಾಕಿರಣ ಟೈಲ್ಸ್ ಕಾರ್ಖಾನೆ ಕಾರ್ಮಿಕರ ಶಾಖಾ ಸಮ್ಮೇಳನ ಮಂಗಳವಾರ ಗುಲ್ವಾಡಿ ಗ್ರಾಮದಲ್ಲಿ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತ ನಾಡಿ, ಪಕ್ಷದ 24ನೇ ರಾಷ್ಟ್ರೀಯ ಮಹಾಧಿವೇಶನ 2025 ಜನವರಿಯಲ್ಲಿ ತಮಿಳು ನಾಡಿನಲ್ಲಿ ನಡೆಯಲಿರುವ ಹಿನ್ನಲೆ ಯಲ್ಲಿ ದೇಶದ ಉದ್ದಗಲಕ್ಕೂ ತಳಮಟ್ಟದ ಶಾಖಾ ಸಮ್ಮೇಳನಗಳು ಆರಂಭಗೊಂಡಿದೆ. ಈ ಸಮ್ಮೇಳನಗಳಲ್ಲಿ ಪಕ್ಷದ ಸಂಘಟನೆ, ಚಟುವಟಿಕೆಗಳನ್ನು ವಿಮರ್ಶಿಸಲಾಗುತ್ತದೆ ಹಾಗೂ ಶಾಖಾ ಮಟ್ಟದಲ್ಲೂ ಹೊಸ ನಾಯಕತ್ವ ಆಯ್ಕೆ ಮಾಡಲಾ ಗುತ್ತದೆ ಅನಂತರ ವಲಯ/ ತಾಲೂಕು/ಜಿಲ್ಲಾ ರಾಜ್ಯ ಸಮ್ಮೇಳನಕ್ಕೆ ಹಂತಹಂತವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಸಿಪಿಎಂ ಪಕ್ಷದ ಹಿರಿಯ ಸದಸ್ಯ ಜಿ.ಬಿ.ಮಹಮ್ಮದ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಮಹಾಬಲ ಬಳ್ಕೂರು ವಹಿಸಿದ್ದರು. ವೇದಿಕೆ ಯಲ್ಲಿ ಪಕ್ಷದ ಸದಸ್ಯ ಶೇಖರ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗರಾಜ ಪೂಜಾರಿ ಮೂರು ವರ್ಷಗಳ ವರದಿ ಮಂಡಿಸಿದರು. ಹೊಸ ಕಾರ್ಯದರ್ಶಿ ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ಅಗಲಿದ ಸೀತಾರಾಮ ಯೆಚೂರಿ ಹಾಗೂ ಬುದ್ಧದೇವ್ ಭಟ್ಟಾಚಾರ್ಯ ಮೊದಲಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅರುಣ್ ಸ್ವಾಗತಿಸಿ ಭಾಸ್ಕರ ವಂದಿಸಿದರು.