ಉಡುಪಿ ತುಳುಕೂಟ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಪುನರಾಯ್ಕೆ

Update: 2024-09-22 13:04 GMT

ಉಡುಪಿ, ಸೆ.22: ಉಡುಪಿ ತುಳುಕೂಟ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆಯಾಗಿದ್ದಾರೆ.

ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸ್ಥಾಪಕಾಧ್ಯಕ್ಷರಾಗಿ ಡಾ.ಭಾಸ್ಕರಾನಂದ ಕುಮಾರ್, ಪ್ರಧಾನ ಕಾರ್ಯದರ್ಶಿ ಯಾಗಿ ಗಂಗಾಧರ ಕಿದಿಯೂರು, ಕೋಶಾಧಿ ಕಾರಿಯಾಗಿ ಚೈತನ್ಯ ಎಂ.ಜಿ., ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ್ ಸನಿಲ್, ರಶ್ಮಿ ಶೆಣೈ, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ಎಸ್. ದೇವಾಡಿಗ, ಸಂತೋಷ್ ಕುಮಾರ್, ಪ್ರಸನ್ನ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ ಮೂಡನಿಡಂಬೂರು, ವಿದ್ಯಾ ಸರಸ್ವತಿ, ಉದಯ್ ಕುಮಾರ್ ತೆಂಕನಿಡಿ ಯೂರು ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ವಿಶ್ವನಾಥ ಶೆಣೈ, ಮುರಳೀಧರ ಉಪಾಧ್ಯಾಯ, ಡಾ. ಗಣನಾಥ ಎಕ್ಕಾರ್, ಎಸ್.ಎ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್, ಮನೋರಮಾ ಶೆಟ್ಟಿ, ಎಸ್.ವಿ.ಭಟ್, ರವಿಶಂಕರ್ ರೈ, ಶಾಂತಾರಾಮ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ತುಳು ಮಿನದನ ಕಾರ್ಯಕ್ರಮ ಸಂಚಾಲಕರಾಗಿ ಡಾ.ವಿ.ಕೆ.ಯಾದವ್, ತುಳುವ ನಡಕೆದ ಸಂಚಾಲಕರಾಗಿ ದಯಾನಂದ ಕೆ., ತುಳು ಪಠ್ಯ ಪುಸ್ತಕದ ಸಂಚಾಲಕರಾಗಿ ವಿಶ್ವನಾಥ ಬಾಯರಿ, ನಿಟ್ಟೂರು ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕ ರಾಗಿ ಜಯರಾಮ್ ಶೆಟ್ಟಿಗಾರ್ ಮಣಿಪಾಲ, ಆಟಿಕೂಟದ ಸಂಚಾಲಕಿಯಾಗಿ ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಸತೀಶ್, ಆಟಿದ ಕಷಾಯದ ಸಂಚಾಲಕರಾಗಿ ವಿವೇಕಾನಂದ ಎನ್., ಸೋಣದ ಸೇಸೆ ಕಾರ್ಯಕ್ರಮದ ಸಂಚಾಲಕಿಯಾಗಿ ವೇದಾ ವತಿ ಶೆಟ್ಟಿ,ಮದರೆಂಗಿದರಂಗ್ ಕಾರ್ಯಕ್ರಮದ ಸಂಚಾಲಕಿಯಾಗಿ ಯಶೋದ ಕೇಶವ್, ಪಣಿಯಾಡಿ ಕಾದಂಬರಿ ಪ್ರಶಸ್ತಿಯ ಸಂಚಾಲಕಿಯಾಗಿ ಶಿಲ್ಪಾಜೋಶಿ, ಕೆಮ್ತೂರು ತುಳು ನಾಟಕ ಸ್ಪರ್ಧೆಯ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ತುಳು ಗೊಬ್ಬಲು ಸ್ಪರ್ಧೆಯ ಸಂಚಾಲಕರಾಗಿ ರತ್ನಾಕರ್ ಇಂದ್ರಾಳಿ ಮತ್ತು ಯು.ಎಸ್. ಉಮ್ಮರ್, ಮಾಧ್ಯಮ ಸಂಚಾಲಕಿಯಾಗಿ ಭಾರತಿ ಟಿ.ಕೆ. ಅವರನ್ನು ನೇಮಿಸಲಾಗಿದೆ. 40 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News