ಕಬಡ್ಡಿ: ಅಲೆವೂರು ಶಾಂತಿನಿಕೇತನ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ
Update: 2024-09-23 12:04 GMT
ಉಡುಪಿ: ನಿಟ್ಟೂರು ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಅಲೆವೂರು ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ಪ್ರಥಮ ಬಹುಮಾನ ಪಡೆದು ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ತಂಡದಲ್ಲಿ ತನ್ವಿ, ಇಂಚರ ಬಿ. ಆಚಾರ್ಯ, ಅಮೃತಾ ಗಿರಿಧರ, ಸಿಂಚನಾ ಎಸ್. ಸುವರ್ಣ, ಪ್ರಾಪ್ತಿ, ಸಾನಿಕಾ ಪಾಟೀಲ್, ಅನ್ವಿತಾ ಎಸ್., ಸುಧೀಕ್ಷಾ, ಆದ್ಯ, ಸಾನ್ವಿಕಾ, ವೈಭವಿ ಎಸ್.ಪೂಜಾರಿ ಇದ್ದರು. ಶಾಲಾ ಸಂಚಾಲಕ ಅಲೆವೂರು ದಿನೇಶ್ ಕಿಣಿ, ಮುಖ್ಯೋಪಾಧ್ಯಾಯಿನಿ ರೂಪಾ ಡಿ.ಕಿಣಿ, ತರಬೇತಿ ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶರತ್ ಎಚ್.ಎಸ್. ಮತ್ತು ವಿಂದ್ಯಾ ರಾವ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.